masthmagaa.com:
ಉಮೇಶ್ ಪಾಲ್ ಹತ್ಯೆಯ ಪ್ರಮುಖ ಆರೋಪಿ ಅತೀಕ್ ಅಹ್ಮದ್ನ ಮಗ ಸೇರಿದಂತೆ ಇಬ್ಬರು ಆರೋಪಿಗಳನ್ನ ಎನ್ಕೌಂಟರ್ ಮಾಡಿದ ಬೆನ್ನಲ್ಲೇ ಮತ್ತೊಂದು ಸ್ಪೋಟಕ ವಿಷಯ ಹೊರಬಿದ್ದಿದೆ. ಪಾಕಿಸ್ತಾನದ ಗುಪ್ತಚರ ಇಲಾಖೆ ISI ಮತ್ತು ಲಷ್ಕರ್ ಉಗ್ರ ಗುಂಪಿನ ಜೊತೆ ನೇರ ಸಂಪರ್ಕ ಹೊಂದಿರೋದಾಗಿ ಅತೀಕ್ ತಪ್ಪೊಪ್ಪಿಕೊಂಡಿದ್ದಾನೆ ಅಂತ ಹೇಳಲಾಗಿದೆ. ಉತ್ತರ ಪ್ರದೇಶದ ಪೊಲೀಸರು ಸಲ್ಲಿಸಿರುವ ಚಾರ್ಜ್ಶಿಟ್ನಲ್ಲಿ ಈ ವಿಷಯ ತಿಳಿಸಿದ್ದಾರೆ. ಜೊತೆಗೆ ಪಾಕಿಸ್ತಾನ ಶಸ್ತ್ರಾಸ್ತ್ರಗಳನ್ನ ಡ್ರೋನ್ಗಳ ಸಹಾಯದಿಂದ ಪಂಜಾಬ್ ಗಡಿಯಲ್ಲಿ ಬೀಳಿಸಲಾಗುತ್ತೆ. ಸ್ಥಳೀಯ ಉಗ್ರರು ಅವುಗಳನ್ನ ಕಲೆಕ್ಟ್ ಮಾಡ್ತಾರೆ. ನೀವು ನನ್ನನ್ನ ನಿಮ್ಮೊಂದಿಗೆ ಕರೆದೊಯ್ದರೆ ಘಟನೆಯಲ್ಲಿ ಬಳಸಲಾದ ಹಣ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನ ಸಂಗ್ರಹಿಸೋಕೆ ಹೆಲ್ಪ್ ಮಾಡ್ತೇನೆ ಅಂತ ಹೇಳಿರೋದಾಗಿ ಉಲ್ಲೇಖಿಸಲಾಗಿದೆ. ಇನ್ನೊಂದ್ ಕಡೆ ಎನ್ಕೌಂಟರ್ನಲ್ಲಿ ಮೃತಪಟ್ಟಿರೊ ಅತೀಕ್ ಮಗ ಅಸ್ಸಾದ್ ಹಾಗೂ ಗುಲಮ್, ಅತೀಕ್ನನ್ನ ಕರೆದೊಯ್ಯುತ್ತಿದ್ದ ವಾಹನದ ಮೇಲೆ ದಾಳಿ ಮಾಡೋಕೆ ಪ್ಲ್ಯಾನ್ ಹಾಕಿಕೊಂಡಿದ್ರು ಅಂತ ಪೊಲೀಸರು ತಿಳಿಸಿದ್ದಾರೆ. ಸಬರಮತಿ ಜೈಲಿನಿಂದ ಯುಪಿಗೆ ಅತೀಕ್ನನ್ನ ಕರೆದುಕೊಂಡ ಬರ್ತಿದ್ದ ವಾಹನದ ಮೇಲೆ ಫೈರಿಂಗ್ ಮಾಡುವ ಯೋಜನೆ ಹಾಕಿಕೊಂಡಿದ್ರು ಎನ್ನಲಾಗಿದೆ. ಮತ್ತೊಂದ್ ಕಡೆ ಮುಸ್ಲಿಂರನ್ನ ಎನ್ಕೌಂಟರ್ ಮಾಡಿರೊ ಬಿಜೆಪಿ ಆಡಳಿತದ ವಿರುದ್ಧ AIMIMನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆಕ್ರೋಶ ಹೊರಹಾಕಿದ್ದಾರೆ. ಹರಿಯಾಣದಲ್ಲಿ ಗೋ ರಕ್ಷಕ ದಳದಿಂದ ಇಬ್ಬರು ಮುಸ್ಲಿಂ ಯುವಕರನ್ನ ಕಳೆದ ಫೆಬ್ರವರಿಯಲ್ಲಿ ಹತ್ಯೆ ಮಾಡಲಾಗಿದೆ. ಹರಿಯಾಣದಲ್ಲಿ ಯಾರ ಸರ್ಕಾರವಿದೆ. ಆ ಆರೋಪಿಗಳ ಮನೆ ಮೇಲೆ ಬುಲ್ಡೋಜರ್ ಹತ್ತಲ್ವಾ? ಅವರ ಎನ್ಕೌಂಟರ್ಗಳನ್ನ ಬುಲೆಟ್ನಿಂದ ಮಾಡಲ್ವಾ? ಜುನೇದ್ ಹಾಗೂ ನಾಸೀರ್ರನ್ನ ಹತ್ಯೆ ಮಾಡಿದೋರನ್ನ ನೀವು ಶೂಟ್ ಮಾಡ್ತೀರಾ? ಅಂತ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. ಜೊತೆಗೆ ನೀವು ಧರ್ಮದ ಹೆಸರಿನಲ್ಲಿ ಎನ್ಕೌಂಟರ್ ಮಾಡ್ತೀರಿ ಅಂತ ಕಿಡಿಕಾರಿದ್ದಾರೆ.
-masthmagaa.com
Contact Us for Advertisement