ಗ್ಯಾನವಾಪಿ ಮಸೀದಿ ಕೇಸ್‌ನಲ್ಲಿ ಮುಸ್ಲಿಂ ವಕೀಲರ ಗಂಭೀರ ಆರೋಪ!

masthmagaa.com:

ಗ್ಯಾನವಾಪಿ ಮಸೀದಿಯಲ್ಲಿ ಇತ್ತೀಚಿಗಷ್ಟೆ ಹಿಂದೂಗಳ ಪೂಜೆಗೆ ಕೋರ್ಟ್ ಅನುಮತಿ ನೀಡಿತ್ತು. ಆದ್ರೆ ಈಗ ಈ ಕೇಸ್‌ನಲ್ಲಿ ಯುಪಿ ಸರ್ಕಾರ ಹಸ್ತಕ್ಷೇಪ ಮಾಡ್ತಿದೆ ಅಂತ ಬಗ್ಗೆ ಮುಸ್ಲಿಂ ಪರ ವಕೀಲರು ಗಂಭೀರ ಆರೋಪ ಮಾಡಿದ್ದಾರೆ..ಗ್ಯಾನ್‌ವಾಪಿ ಕೇಸ್‌ ಸಂಬಂಧ ಬುಧವಾರ ನಡೆದ ವಿಚಾರಣೆ ವೇಳೆ ಅಲಹಾಬಾದ್‌ ಹೈಕೋರ್ಟ್‌ನ ಕೊಠಡಿಯಲ್ಲಿ ಯುಪಿ ಸರ್ಕಾರದ ಅಡ್ವೋಕೇಟ್ ಜನರಲ್‌ ಹಾಜರಿದ್ರು. ‌ ವಿಚಾರಣೆ ವೇಳೆ ಸರ್ಕಾರದ ವಕೀಲರಿಗೆ ಏನು ಕೆಲಸ ಅಂತ ಪ್ರಶ್ನಿಸಿ ಮುಸ್ಲಿಂ ಪರ ವಕೀಲ ನಖ್ವಿ ಈ ಆರೋಪ ಮಾಡಿದ್ದಾರೆ.

-masthm

Contact Us for Advertisement

Leave a Reply