masthmagaa.com:
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮನೆ ಎದುರು ಹನುಮಾನ್ ಚಾಲೀಸ ಹೇಳಿ ಆರೆಸ್ಟ್ ಆಗಿದ್ದ ರಾಣಾ ದಂಪತಿಗಳಿಗೆ ದೇಶ ದ್ರೋಹದ ಕೇಸ್ ಹಾಕಲಾಗುವುದಿಲ್ಲ ಅಂತ ಮುಂಬೈ ಸ್ಪೆಶಲ್ ಕೋರ್ಟ್ ಹೇಳಿದೆ. ಈ ದಂಪತಿಗಳು ತಮ್ಮ ವಾಕ್ ಸ್ವಾತಂತ್ರ್ಯದ ಲಿಮಿಟ್ ಅನ್ನ ಮೀರಿರೋದು ನಿಜ. ಆದ್ರೆ ಅವರ ಹೇಳಿಕೆಗಳು ದೇಶ ದ್ರೋಹದ ಪರಿಧಿಗೆ ಬರೋದಿಲ್ಲ. ಅವ್ರು ಉದ್ಧವ್ ಠಾಕ್ರೆಯವರ ಮನೆ ಎದುರು ಘೋಷಣೆಗಳನ್ನ ಕೂಗೋದಾಗಿ ಹೇಳಿದ್ರು. ಆದ್ರೆ ಇದು ಸರ್ಕಾರಕ್ಕೆ ಹಾನಿ ಮಾಡುವ ಉದ್ದೇಶಹೊಂದಿಲ್ಲ ಅಂತ ಕೋರ್ಟ್ ಹೇಳಿದ್ದು ರಾಣಾ ದಂಪತಿಗಳಿಗೆ ಜಾಮೀನು ನೀಡಿದೆ.
-masthmagaa.com
Contact Us for Advertisement