masthmagaa.com:
ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳನ್ನ ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡೋದು ಮುಂದುವರೆದಿದೆ. ರಾಜಧಾನಿ ಸಿಡ್ನಿಯಲ್ಲಿರುವ ಪ್ರಮುಖ ಹಿಂದೂ ದೇವಾಲಯದ ಗೋಡೆಗಳ ಮೇಲೆ ಭಾರತ ವಿರೋಧಿ ಬರಹಗಳನ್ನ ಬರೆದು ವಿರೂಪಗೊಳಿಸಲಾಗಿದೆ. ಸಿಡ್ನಿಯ ರೋಸ್ಹಿಲ್ನಲ್ಲಿರುವ ಬಿಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರದಲ್ಲಿ ಈ ಘಟನೆ ನಡೆದಿದ್ದು, ದೇವಾಲಯದ ಗೇಟ್ ಮೇಲೆ ಖಲಿಸ್ತಾನ ಧ್ವಜವನ್ನ ಹಾಕಲಾಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಮಂದಿರದ ಗೋಡೆಗಳ ಮೇಲೆ ಈ ರೀತಿ ಭಾರತ ವಿರೋಧಿ ಬರಹಗಳನ್ನ ಕಂಡು ನಮಗೆ ದುಃಖ ಉಂಟಾಗಿದೆ ಅಂತ ದೇವಸ್ಥಾನದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಂದ್ಹಾಗೆ ಮೇ 24 ರಂದು ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಆಸ್ಟ್ರೇಲಿಯಾಗೆ ಭೇಟಿ ನೀಡಲಿದ್ದಾರೆ. ಇದೇ ಹೊತ್ತಲ್ಲೆ ಆಸ್ಟ್ರೇಲಿಯಾದಲ್ಲಿರುವ ಹಿಂದೂ ದೇವಾಲಯಗಳ ಮೇಲಿನ ದಾಳಿ ಹೆಚ್ಚಾಗುತ್ತಿರೋದು ಆತಂಕಕ್ಕೆ ಕಾರಣವಾಗಿದೆ.
-masthmagaa.com
Contact Us for Advertisement