masthmagaa.com:
ಬಾಂಗ್ಲಾದೇಶದಲ್ಲಿ ದೇವಸ್ಥಾನಗಳ ಮೇಲೆ ನಿರಂತರವಾಗಿ ದಾಳಿ ಮುಂದುವರಿದಿದೆ. ಸೋಮವಾರ ರಾತ್ರಿ ನೌಗಾಂವ್ ಜಿಲ್ಲೆಯ ಎರಡು ಗ್ರಾಮಗಳಲ್ಲಿ ದುಷ್ಕರ್ಮಿಗಳ ಗುಂಪು ದೇವಸ್ಥಾನಗಳ ಮೇಲೆ ದಾಳಿ ನಡೆಸಿವೆ. ಈ ವೇಳೆ ದಾಳಿಕೋರರು ದೇಗುಲದಲ್ಲಿ ಇಟ್ಟಿದ್ದ ದೇವರ ಮೂರ್ತಿಗಳಿಗೆ ಹಾನಿ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರೋ ಪೊಲೀಸರು, ತನಿಖೆ ಶುರು ಮಾಡಿದ್ದೀವಿ. ಆರೋಪಿಗಳಿಗಾಗಿ ಹುಡುಕಾಟ ನಡೀತಾ ಇದೆ. ಇದಕ್ಕೂ ಮುನ್ನ ನಮ್ಮ ಗ್ರಾಮದಲ್ಲಿ ಈ ರೀತಿಯ ಯಾವುದೇ ಘಟನೆ ನಡೆದಿರಲಿಲ್ಲ ಅಂತ ಹೇಳಿದ್ದಾರೆ. ನವರಾತ್ರಿ ಪೂಜೆ ವೇಳೆ ಇಡೀ ದೇಶದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ ನಡೆದ ಬಳಿಕ ಸ್ವಲ್ಪ ಶಾಂತಿಯುತ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ರೀಗ ದೀಪಾವಳಿ ಬರ್ತಿದ್ದಂತೆ ಮತ್ತೆ ಶಾಂತಿ ಕೆಡಿಸೋ ಪ್ರಯತ್ನಗಳು ಶುರುವಾಗ್ತಿವೆ.
-masthmagaa.com
Contact Us for Advertisement