masthmagaa.com:
ರಾಜ್ಯದಲ್ಲಿ ಕೊರೋನಾ ನಡುವೆ ಗಣೇಶೋತ್ಸವ ಹೇಗೆ ನಡೆಸಬೇಕು ಅನ್ನೋದಕ್ಕೆ ಸಂಬಂಧಿಸಿದಂತೆ ನಾಳೆ ಮಹತ್ವದ ನಿರ್ಧಾರ ಹೊರ ಬೀಳಲಿದೆ. ಇತ್ತೀಚೆಗೆ ಸಿಎಂ ನೇತೃತ್ವದಲ್ಲಿ ಈ ಸಂಬಂಧ ಸಭೆ ನಡೆದಿತ್ತು. ಆದ್ರೆ ಹಬ್ಬ ಆಚರಣೆಗೆ ಯಾವ ರೀತಿಯ ನಿರ್ಬಂಧಗಳನ್ನ ವಿಧಿಸಬೇಕು, ಯಾವ ರೀತಿ ಅನುಮತಿ ಕೊಡ್ಬೇಕು ಅನ್ನೋದಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 5ನೇ ತಾರೀಖು ಘೋಷಣೆ ಮಾಡ್ತೀವಿ ಅಂತ ಸರ್ಕಾರ ಹೇಳಿತ್ತು. ಹೀಗಾಗಿ ಈ ಬಾರಿಯ ಗಣೇಶೋತ್ಸವ ಹೇಗಿರಲಿದೆ ಅನ್ನೋದು ನಾಳೆಯ ಸಭೆ ಬಳಿಕ ಗೊತ್ತಾಗಲಿದೆ. ಇದರ ನಡುವೆ, ಈಸಲ ಗಲ್ಲಿಗಲ್ಲಿಯಲ್ಲಿ ಗಣೇಶ ಮೂರ್ತಿ ಕೂರಿಸಬಾರ್ದು, ದೇವಸ್ಥಾನಗಳಲ್ಲಿ ಕೂರಿಸಬೇಕು ಅಂತ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ಪಂತ್ ಮನವಿ ಮಾಡಿದ್ದಾರೆ.
-masthmagaa.com
Contact Us for Advertisement