ಹಾವಿನಿಂದ ಕಚ್ಚಿಸಿ ಪತ್ನಿಯನ್ನೇ ಕೊಂದ ಪತಿ.. ಕಾರಣವೇನು ಗೊತ್ತಾ..?

masthamagaa.com:

ಕೊಲ್ಲಂ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನ ಹಾವಿನಿಂದ ಕಚ್ಚಿಸಿ ಕೊಲೆ ಮಾಡಿದ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಅಂಚಲ್​ನಲ್ಲಿ ನಡೆದಿದೆ. ಮೇ 6ರಂದು ಉತ್ರಾ ಎಂಬ 25 ವರ್ಷ ವಯಸ್ಸಿನ ಮಹಿಳೆ ಹಾವು ಕಚ್ಚಿ ಮೃತಪಟ್ಟಿದ್ದರು. ಪ್ರಕರಣದ ತನಿಖೆ ವೇಳೆ ಇದೊಂದು ಪ್ರಿ ಪ್ಲಾನ್ಡ್ ಮರ್ಡರ್ ಅನ್ನೋದು ಗೊತ್ತಾಗಿದ್ದು, ಆರೋಪಿ ಪತಿ ಹಾಗೂ ಆತನಿಗೆ ಹಾವು ಕೊಟ್ಟಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.

ಅಂದ್ಹಾಗೆ ಆರೋಪಿ ಸೂರಜ್​ ತನ್ನ ಪತ್ನಿಯನ್ನು ಕೊಲ್ಲಲು ಸ್ನೇಕ್ ಸುರೇಶ್​ ಬಳಿ ಹಾವೊಂದನ್ನು ಖರೀದಿಸಿದ್ದ. ಮೇ 6ರಂದು ರಾತ್ರಿ ಉತ್ರಾ ತನ್ನ ತವರು ಮನೆಯಲ್ಲಿ ಮಲಗಿದ್ದಾಗ ಅಲ್ಲಿಗೆ ಬಂದ ಸೂರಜ್ ಆಕೆಯ ಮೇಲೆ ಹಾವನ್ನು ಎಸೆದಿದ್ದಾನೆ. ಅಲ್ಲೇ ನಿಂತು 2 ಬಾರಿ ಆಕೆಗೆ ಹಾವು ಕಚ್ಚುವುದನ್ನು ನೋಡಿದ್ದಾನೆ. ಬಳಿಕ ಅದನ್ನ ಹಿಡಿಯಲು ಮುಂದಾದಾಗ ಅದು ತಪ್ಪಿಸಿಕೊಂಡಿದೆ. ಹೀಗಾಗಿ ರಾತ್ರಿಯಿಡೀ ಎಚ್ಚರವಿದ್ದ ಆತ, ಬೆಳಗ್ಗೆ ಬೇಗ ಎದ್ದು ಹೋಗಿದ್ದಾನೆ. ಉತ್ರಾಳ ಪೋಷಕರು ನೋಡಿದಾಗ ಆಕೆ ಮೃತಪಟ್ಟಿದ್ದಳು. ಅಲ್ಲದೆ ಕೊಠಡಿಯಲ್ಲಿ ಹಾವು ಕೂಡ ಪತ್ತೆಯಾಗಿದೆ.

ಮೇ 2ರಂದು ಗಂಡನ ಮನೆಯಲ್ಲಿದ್ದಾಗಲೂ ಉತ್ರಾಳಿಗೆ ಹಾವು ಕಚ್ಚಿತ್ತು. ಆಗ ಚಿಕಿತ್ಸೆ ಪಡೆದಿದ್ದ ಆಕೆ ಬದುಕುಳಿದ್ದಿದ್ದಳು. ಇದೀಗ ಮತ್ತೆ ಹಾವು ಕಚ್ಚಿದ್ದರಿಂದ ಅನುಮಾನಗೊಂಡ ಉತ್ರಾಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ವೇಳೆ ಆರೋಪಿ ಸೂರಜ್ ಹಾಗೂ ಸ್ನೇಕ್ ಸುರೇಶ್​ ಪೊಲೀಸರ ಎದುರು ಕಣ್ಣೀರು ಹಾಕಿ ತಪ್ಪೊಪ್ಪಿಕೊಂಡಿದ್ದಾರೆ.

ಆರೋಪಿ ಸೂರಜ್​ ಬೇರೆ ಯುವತಿಯ ಜೊತೆ ಮದುವೆಯಾಗಬೇಕು ಅಂದುಕೊಂಡಿದ್ದ. ಹೀಗಾಗಿಯೇ ತನ್ನ ಪತ್ನಿಯ ಕಥೆ ಮುಗಿಸಲು ಈ ಖತರ್ನಾಕ್ ಪ್ಲಾನ್ ಮಾಡಿದ್ದಾನೆ ಅಂತ ಪೊಲೀಸರು ಹೇಳಿದ್ದಾರೆ. ಅಲ್ಲದೆ ಹಾವನ್ನು ಹಿಡಿಯುವ ಬಗ್ಗೆ ಯೂಟ್ಯೂಬ್​ನಲ್ಲಿ ಸಾಕಷ್ಟು ವಿಡಿಯೋಗಳನ್ನು ನೋಡಿದ್ದ. ಸ್ನೇಕ್​ ಸುರೇಶ್​ ಬಳಿಯೂ ಕೆಲವೊಂದು ಸಲಹೆಗಳನ್ನ ಪಡೆದಿದ್ದ. ಜೊತೆಗೆ ಮದುವೆಯಾಗುವಾಗ ವರದಕ್ಷಿಣೆ ರೂಪದಲ್ಲಿ ಚಿನ್ನಾಭರಣ ಹಾಗೂ ಸಾಕಷ್ಟು ಹಣ ಪೀಕಿದ್ದ ಅನ್ನೋದು ಗೊತ್ತಾಗಿದೆ.

-masthmagaa.com

Contact Us for Advertisement

Leave a Reply