masthmagaa.com:
ಕುಡಿದ ಅಮಲಿನಲ್ಲಿ ಪತ್ನಿಯ ಮೂಗನ್ನ ಕಚ್ಚಿ ಪತಿ ಪರಾರಿಯಾದ ಘಟನೆ, ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೆ ಒಳಗಾದ ಪತ್ನಿಯ ಹೆಸ್ರು ಗೀತಾ.. ಈಕೆ ತನ್ನೆರಡು ಮಕ್ಕಳೊಂದಿಗೆ ತಾಯಿಯ ಮನೆಯಲ್ಲಿ ವಾಸವಿದ್ರು. ನಿನ್ನೆ ಕುಡಿದು ಬಂದು ಸಣ್ಣದಾಗಿ ಜಗಳ ತೆಗೆದು ಬಾಯಿಗೆ ಬಂದ ಹಾಗೆ ಬೈಯಲು ಪ್ರಾರಂಭಿಸಿದ ಪತಿ ಉಮೇಶ, ನಂತ್ರ ಏಕಾಏಕಿಯಾಗಿ ಗೀತಾಳ ಮೂಗು ಕಚ್ಚಿ, ಗೀತಾಳ ತಾಯಿಯ ಕತ್ತನ್ನ ಹಿಸುಕಿದ್ದಾನೆ. ಆಗ ತಾಯಿ ಮಗಳು ಚೀರಾಡುವುದನ್ನು ಕೇಳಿ ಅಕ್ಕ ಪಕ್ಕದ ಮನೆಯವ್ರು ಸ್ಥಳಕ್ಕೆ ಬಂದಿದ್ದಾರೆ. ಆದ್ರೆ ಅಷ್ಟರಲ್ಲಿ, ಉಮೇಶ ಪರಾರಿಯಾಗಿದ್ದಾನೆ.
-masthmagaa.com
Contact Us for Advertisement