ಪಕ್ಷದ ಅಧ್ಯಕ್ಷನಾಗಿ ನಾನ್‌ ಹೇಳ್ತಾ ಇದ್ದೀನಿ..! ಹೀಗಂತ ಸಿದ್ದುಗೆ ಡಿಕೆ ಕೊಟ್ಟ ಡಿಚ್ಚಿ ಹೇಗಿತ್ತು?

masthmagaa.com:

ರಾಜ್ಯ ಕಾಂಗ್ರೆಸ್‌ ವಲಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡುವಿನ ಮುಸುಕಿನ ಗುದ್ದಾಟ ಇನ್ನೂ ಕಡಿಮೆಯಾಗಿಲ್ಲ. ಕಳೆದ ವಾರವಷ್ಟೇ ರಾಹುಲ್‌ ನೇತೃತ್ವದಲ್ಲಿ ಡಿಕೆಶಿ ಹಾಗೂ ಸಿದ್ದು ನಡುವೆ ಒನ್‌ ಟು ಹಾಗೂ ಸಂಧಾನ ಸಭೆ ಮಾಡಲಾಗಿತ್ತು. ಹಾಗಿದ್ರೂ ಇಬ್ಬರ ನಡುವಿನ ಮುನಿಸು ಇದೆ ಅನ್ನೋದನ್ನ ಡಿಕೆಶಿ ಪರೋಕ್ಷವಾಗಿ ಹೊರಹಾಕಿದ್ದಾರೆ. ಕಳೆದ ವರ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಸ್ಪರ್ಧಿಸಿ ಸೋತಿದ್ವಿ. ಹಾಗಿದ್ರೂ ಅವರಿಗೆ ವಿಪಕ್ಷ ಸ್ಥಾನವನ್ನ ಕೊಟ್ಟಿದ್ದೀವಿ ಅಂತ ಹೇಳಿದ್ರು. ಜೊತೆಗೆ ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ ನಾವು ಮುಂದಿನ ಚುನಾವಣೆಯನ್ನ ಸಾಮೂಹಿಕ ನಾಯಕತ್ವದಲ್ಲೇ ಎದುರಿಸುತ್ತೇವೆ. ನಮಗೆ ವ್ಯಕ್ತಿಪೂಜೆ ಮುಖ್ಯವಲ್ಲ ನಮಗೆ ಪಕ್ಷ ಮುಖ್ಯ ಅಂತ ಅಂತ ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಅಂತ ಹೇಳುತ್ತಾ ಈಗ ಸಿದ್ದರಾಮೋತ್ಸವ ಮಾಡೋಕೆ ಮುಂದಾಗಿರೋ ಅವರ ಬೆಂಬಲಿಗರಿಗೆ ಪರೋಕ್ಷವಾಗಿ ಡಿಚ್ಚಿ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply