ಕೇರಳ ಸರಣಿ ಸ್ಫೋಟ: ಇದನ್ನ ಬಲವಾಗಿ ಖಂಡಿಸ್ತೀನಿ ಎಂದ ಕಾಂಗ್ರೆಸ್‌ನ ಶಶಿ ತರೂರ್‌!

masthmagaa.com:

ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದ ಭಾರೀ ಸರಣಿ ಸ್ಫೋಟದ ಕುರಿತು, ಹಿರಿಯ ಕಾಂಗ್ರೆಸ್‌ ನಾಯಕ ಹಾಗೂ ಸಂಸದ ಶಶಿ ತರೂರ್‌ ಅವರು `X’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ʻಈ ಘಟನೆಯಿಂದ ನನಗೆ ಶಾಕ್‌ ಹಾಗೂ ಬೇಸರವಾಗಿದೆ. ನಾನಿದನ್ನ ಸಂಪೂರ್ಣವಾಗಿ ಖಂಡಿಸ್ತೀನಿ ಮತ್ತು ಶೀಘ್ರವಾಗಿ ಪೊಲೀಸರು ಸೂಕ್ತ ಕ್ರಮವನ್ನ ತೆಗೆದುಕೊಳ್ಳಬೇಕಾಗಿ ಕೇಳಿಕೊಳ್ತೀನಿ. ಪ್ರಾಣವನ್ನೇ ಕಸಿದುಕೊಳ್ಳೋ ಕ್ರೂರ ಮನಸ್ಥಿತಿಗೆ ನನ್ನ ರಾಜ್ಯದ ಜನರು ಬಲಿಪಶು ಆಗೋದನ್ನ ನೋಡುವುದು ದುರಂತವಾಗಿದೆ. ಈ ರೀತಿಯ ಕೃತ್ಯವನ್ನ ಎಲ್ಲಾ ಧಾರ್ಮಿಕ ಮುಖಂಡರು ಖಂಡಿಸಬೇಕಾಗಿ ನಾನು ಒತ್ತಾಯಿಸ್ತೀನಿʼ ಅಂತ ಪೋಸ್ಟ್‌ ಮಾಡಿದ್ದಾರೆ. ಅಂದ್ಹಾಗೆ ಕೇರಳದ ಎರ್ನಾಕುಲಂ ಜಿಲ್ಲೆಯ ಕನ್ವೆನ್‌ಷನ್‌ ಸೆಂಟರ್‌ನಲ್ಲಿ ಇಂದು ಬೆಳಗ್ಗೆ ನಡೆದ ಸ್ಫೋಟದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ಸುಮಾರು 40 ಮಂದಿ ಗಾಯಗೊಂಡಿರೋದಾಗಿ ವರದಿಯಾಗಿದೆ.

-masthmagaa.com

Contact Us for Advertisement

Leave a Reply