masthmagaa.com:
ಇನ್ನು ಬಿಟ್ಕಾಯಿನ್ ವಿಚಾರ ಇಟ್ಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರೋ ವಿಪಕ್ಷ ನಾಯಕ ಸಿದ್ದರಾಮಯ್ಯ, 2016ರಲ್ಲಿ ನಾನು ಸಿಎಂ ಆಗಿದ್ದು ನಿಜ. ಆದ್ರೆ ನಮ್ಮ ಗಮನಕ್ಕೆ ಇದು ಬಂದಿರಲಿಲ್ಲ. ಈ ಶ್ರೀಕಿ ಯಾರು ಅಂತ ಗೊತ್ತೂ ಇಲ್ಲ ನಮ್ಗೆ. ಅವತ್ತು ಇವನ ಮೇಲೆ ಯಾವ ಕೇಸೂ ಇರಲಿಲ್ಲ. ಶ್ರೀಕಿ ಅರೆಸ್ಟ್ ಆದಾಗ, ಪೊಲೀಸ್ ಕಸ್ಟಡಿಯಲ್ಲಿದ್ದಾಗ, ಬೇಲ್ ಮೇಲೆ ರಿಲೀಸ್ ಆದಾಗ ಗೃಹ ಸಚಿವರಾಗಿದ್ದು ಬಸವರಾಜ ಬೊಮ್ಮಾಯಿ. ನಮ್ಮ ಕಾಲದಲ್ಲಿ ಹಿಂಗಾಗಿರಲಿಲ್ಲ. ನಲಪಾಡ್ ಗಲಾಟೆ ಪ್ರಕರಣದಲ್ಲಿ ಅದೇನ್ ಮಾಡಬೇಕೋ ಮಾಡಿದ್ದಾರೆ. ನಾನು ಸಿಎಂ ಆಗಿದ್ದಾಗ ಹಗರಣ ನಡೆದಿದ್ದರೆ, ಆಗ ವಿಪಕ್ಷದಲ್ಲಿದ್ದ ಬಿಜೆಪಿಯವರು ಯಾಕೆ ಸುಮ್ಮನೆ ಕೂತಿದ್ರು ಅಂತ ಪ್ರಶ್ನೆ ಮಾಡಿದ್ದಾರೆ.
-masthmagaa.com
Contact Us for Advertisement