ಶ್ರೀಕಿ ಯಾರು ಅಂತ ಗೊತ್ತಿಲ್ಲ : ಸಿದ್ದರಾಮಯ್ಯ

masthmagaa.com:

ಇನ್ನು ಬಿಟ್​ಕಾಯಿನ್​ ವಿಚಾರ ಇಟ್ಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರೋ ವಿಪಕ್ಷ ನಾಯಕ ಸಿದ್ದರಾಮಯ್ಯ, 2016ರಲ್ಲಿ ನಾನು ಸಿಎಂ ಆಗಿದ್ದು ನಿಜ. ಆದ್ರೆ ನಮ್ಮ ಗಮನಕ್ಕೆ ಇದು ಬಂದಿರಲಿಲ್ಲ. ಈ ಶ್ರೀಕಿ ಯಾರು ಅಂತ ಗೊತ್ತೂ ಇಲ್ಲ ನಮ್ಗೆ. ಅವತ್ತು ಇವನ ಮೇಲೆ ಯಾವ ಕೇಸೂ ಇರಲಿಲ್ಲ. ಶ್ರೀಕಿ ಅರೆಸ್ಟ್ ಆದಾಗ, ಪೊಲೀಸ್​ ಕಸ್ಟಡಿಯಲ್ಲಿದ್ದಾಗ, ಬೇಲ್​ ಮೇಲೆ ರಿಲೀಸ್​ ಆದಾಗ ಗೃಹ ಸಚಿವರಾಗಿದ್ದು ಬಸವರಾಜ ಬೊಮ್ಮಾಯಿ. ನಮ್ಮ ಕಾಲದಲ್ಲಿ ಹಿಂಗಾಗಿರಲಿಲ್ಲ. ನಲಪಾಡ್​ ಗಲಾಟೆ ಪ್ರಕರಣದಲ್ಲಿ ಅದೇನ್​ ಮಾಡಬೇಕೋ ಮಾಡಿದ್ದಾರೆ. ನಾನು ಸಿಎಂ ಆಗಿದ್ದಾಗ ಹಗರಣ ನಡೆದಿದ್ದರೆ, ಆಗ ವಿಪಕ್ಷದಲ್ಲಿದ್ದ ಬಿಜೆಪಿಯವರು ಯಾಕೆ ಸುಮ್ಮನೆ ಕೂತಿದ್ರು ಅಂತ ಪ್ರಶ್ನೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply