ಬಿಜೆಪಿ, ಆರ್​ಎಸ್​ಎಸ್​ ನಾಯಕರನ್ನು ಗುರಿಯಾಗಿಸಿ ದಳಪತಿಗಳ ದಾಳಿ!

masthmagaa.com:

ಬಿಜೆಪಿ ದಾಳಿ ನಡೆಸಿದ ಬೆನ್ನಲ್ಲೇ ಜೆಡಿಎಸ್ ಕೂಡ ಟ್ವೀಟ್ಟರ್ ಬಿಲ್ಲು ಹಿಡಿದು, ಟ್ವೀಟ್ ಬಾಣದ ಮಳೆ ಸುರಿಸಿದೆ. ಆರ್​ಎಸ್​ಎಸ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಆರ್.ಎಸ್.ಎಸ್ ಅಧಿಕೃತ ಸಂಸ್ಥೆನಾ? ಅದರ ಕೆಲಸ ಸಮಾಜ ಸೇವೆನಾ ಅಥವಾ ರಾಜಕೀಯನಾ? ಅಥವಾ ಹಣ ಮಾಡೋದಾ? ಗುರುದಕ್ಷಣೆ ಸೇರಿದಂತೆ ದೇಶ-ವಿದೇಶಗಳಿಂದ ಕೋಟ್ಯಂತರ ರೂಪಾಯಿ ದೇಣಿಗೆ ಬರುತ್ತಿದೆ. ಅದಕ್ಕೆ ಸಂಘ ಲೆಕ್ಕ ಕೊಟ್ಟಿದಿಯಾ? ಶಿಕ್ಷಣ ಕೊಡುವ ನೆಪದಲ್ಲಿ ಮತಾಂಧತೆಯ ವಿಷಪ್ರಾಶನ ಮಾಡುತ್ತಿರುವುದು ಪೊಳ್ಳಾ? ಸಂಘದ ಶಾಖೆಗಳಲ್ಲಿ ತ್ರಿಶೂಲ, ಖಡ್ಗದಂಥ ಆಯುಧಗಳನ್ನ ಇಡೋದು ಅಕ್ರಮ. ಇದಕ್ಕೆ ಲೈಸೆನ್ಸ್ ಪಡೆದಿದ್ದೀರಾ? ಅಂತ ಪ್ರಶ್ನೆ ಕೇಳಿದ್ದರು ಕುಮಾರಸ್ವಾಮಿ. ಆದ್ರೆ ಬಿಜೆಪಿ ಅವರ ವೈಯಕ್ತಿಕ ವಿಚಾರದಲ್ಲಿ ಮೂಗು ತೂರಿಸಿದೆ. ಸದನದಲ್ಲೇ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡಿ ಎದೆಗಾರಿಕೆ ತೋರಿರೋ ಕುಮಾರಸ್ವಾಮಿ ಎಲ್ಲಿ? ಅದೇ ಸದನದಲ್ಲಿ ನೀಚ ಕೃತ್ಯ ಎಸಗಿದ ಬಿಜೆಪಿ ನಾಯಕರು ಎಲ್ಲಿ? ಅಂತ ಸರಣಿ ಪ್ರಶ್ನೆಗಳನ್ನ ಕೇಳಿದೆ ಜೆಡಿಎಸ್​.

-masthmagaa.com

Contact Us for Advertisement

Leave a Reply