ಒಂದೇ ವೇದಿಕೆಯಲ್ಲಿ ಶಿವಣ್ಣ ಮತ್ತು ಬಾಲಿವುಡ್ ನಟ ಅನುಪಮ್ ಖೇರ್ ಸುದ್ದಿಗೋಷ್ಠಿ!

masthmagaa.com:

ಆರ್. ಜೆ. ಶ್ರೀನಿ ನಿರ್ದೇಶನದಲ್ಲಿ ಶಿವರಾಜಕುಮಾರ್ ಅಭಿನಯಿಸುತ್ತಿರುವ ‘ಘೋಸ್ಟ್’ ಸಿನಿಮಾದ ಶೂಟಿಂಗ್‌ ಕೊನೆ ಹಂತಕ್ಕೆ ತಲುಪಿದೆ. ಇನ್ನೂ ಕಥೆ ಒಂದೇ ಚಿತ್ರಕ್ಕೆ ಮುಗಿಯುವುದಿಲ್ಲ. ಎರಡನೇಯ ಭಾಗದಲ್ಲೂ ಮುಂದುವರಿಯಲಿದೆ. ಶಿವರಾಜಕುಮಾರ್, ಅನುಪಮ್ ಖೇರ್, ಮಲಯಾಳಂ ನಟ ಜಯರಾಮ್ ತಾರಾಗಣದಲ್ಲಿದ್ದಾರೆ.

ಸಿನಿಮಾ ಈಗಾಗಲೇ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದೆ. ನಿನ್ನೆ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಚಿತ್ರತಂಡದಿಂದ ಆರ್‌. ಜೆ. ಶ್ರೀನಿ, ಶಿವರಾಜ್‌ ಕುಮಾರ್‌, ಅನುಪಮ್‌ ಖೇರ್‌, ಮಲಯಾಳಂ ನಟ ಜಯರಾಮ್‌ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಬಾಲಿವುಡ್‌ ನಟ ಅನುಪಮ್‌ ಖೇರ್‌ ʻಘೋಸ್ಟ್‌ʼ ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ. ಎರಡನೇ ಭಾಗಕ್ಕಾಗಿ ನಾನು ಕಾಯುತ್ತಿದ್ದೇನೆ. ತುಂಬಾ ದಿನಗಳಿಂದ ಬೆಂಗಳೂರಿನಿಂದ ದೂರ ಇದ್ದೇ ಈ ಸಿನಿಮಾದ ಮೂಲಕ ಮತ್ತೇ ನನಗೆ ಇಲ್ಲಿಗೆ ಬರುವ ಅವಕಾಶ ದೊರೆಯಿತು. ಗುಜರಾತಿ ಬಿಟ್ಟು ನಾನು ತೆಲಗು, ಮಲಯಾಳಂ, ತಮಿಳು, ಮರಾಠಿ ಹಾಗೂ ಎಲ್ಲಾ ಭಾಷೆಯ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದೇನೆ, ಅಲ್ಲದೇ ಚೈನೀಸ್‌ ಭಾಷೆಯ ಸಿನಿಮಾದಲ್ಲು ನಟಿಸಿದ್ದೇನೆ. ಎಲ್ಲಾ ಸಿನಿಮಾಗಳೂ ಒಂದೇ, ದೇಶವು ವಿವಿಧತೆಯಲ್ಲಿ ಏಕತೆಯನ್ನು ತೋರಿಸುತ್ತದೆ. ಸಿನಿಮಾವನ್ನ ಹಾಲಿವುಡ್‌, ಬಾಲಿವುಡ್‌ ಅಂತೆಲ್ಲಾ ಬೇರ್ಪಡಿಸಬಾರದು. ನನಗೆ ಈ ಸಿನಿಮಾದಲ್ಲಿ ಅಭಿನಯಿಸಿದಕ್ಕೆ ತುಂಬಾ ಖುಷಿ ಇದೆʼ ಎಂದು ಹೇಳಿದರು.

ಮಲಯಾಳಂ ನಟ ಜಯರಾಮ್‌ ಮಾತನಾಡಿ ʻಕನ್ನಡದಲ್ಲಿ ಇದು ನನ್ನ ಮೊದಲ ಸಿನಿಮಾ , ಇಲ್ಲಿಯವರೆಗೂ ತೆಲಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದೆ, ಈಗ ಶಿವರಾಜ್‌ ಕುಮಾರ್‌ ಅವರೊಂದಿಗೆ ಕನ್ನಡದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ, ನಾನು ಪ್ರತಿವರ್ಷ ಕಲ್ಯಾಣ್‌ ಜ್ಯೂವೇಲರ್ಸ್‌ ಕಾರ್ಯಕ್ರಮದಲ್ಲಿ ಶಿವರಾಜ್‌ ಕುಮಾರ್‌ ಅವರನ್ನ ಭೇಟಿ ಆಗುತ್ತಿದೆ. ಆವಾಗ ಅವರನ್ನ ಕನ್ನಡ ಸಿನಿಮಾದಲ್ಲಿ ಅಭಿನಯಿಸಲು ಒನ್‌ ಚಾನ್ಸ್‌ ಕೇಳಿದ್ದೆ ಈಗ ಅದು ದೊರೆತಿದೆ. ಕನ್ನಡ ಸ್ವೀಟ್‌ ಲಾಗ್ವೇಜ್‌ ʻಘೋಸ್ಟ್‌ʼ ಸಿನಿಮಾದ 100 ಡೇಸ್‌ ಫಂಕ್ಷನ್‌ನಲ್ಲಿ ನಾನು ಖಂಡಿತ ಕನ್ನಡದಲ್ಲಿ ಮಾತನಾಡುತ್ತೇನೆ.ʼ ಎಂದು ಹೇಳಿದರು.

ಶಿವರಾಜ್‌ ಕುಮಾರ್‌ ಅವರು ಘೋಸ್ಟ್‌ ಸಿನಿಮಾತಂಡದ ಬಗ್ಗೆ ಮಾತನಾಡಿ ʻಸಿನಿಮಾದಲ್ಲಿ ಎಲ್ಲ ಒಳ್ಳೆಯ ನಟರಿದ್ದಾರೆ. ಜಯರಾಮ್‌ ಅವರು ಒಬ್ಬ ದೊಡ್ಡ ಕಲಾವಿದರು ಅವರ ನಟನೆಯಲ್ಲಿ ಸಿರಿಯಸ್‌ನೆಸ್‌ ಇದೆ, ಇನೋಸೆನ್ಸ್‌ ಇದೆ ಜೋತೆಗೆ ಕಿಲಾಡಿತನವು ಇದೆ. ಹೀಗೆ ಜಯರಾಮ್‌ ಒಬ್ಬ ದೊಡ್ಡ ಕಲಾವಿದರು. ಅನುಪಮ್‌ ಖೇರ್‌ ಅವರು ಕೂಡ ತುಂಬಾ ಪ್ರತಿಭಾವಂತ ನಟ. ಶ್ರೀನಿಯವರೂ ತುಂಬಾ ಪರಿಶ್ರಮ ಪಟ್ಟಿದ್ದಾರೆ.ʼ ಎಂದು ಚಿತ್ರತಂಡದ ಬಗ್ಗೆ ಹೇಳಿದರು. ಇನ್ನೂ ಘೋಸ್ಟ್ ಸಿನಿಮಾದಲ್ಲಿ ಶಿವರಾಜಕುಮಾರ್‌ಗೆ ನಾಯಕಿ ಇಲ್ಲ, ಆದರೆ, ಸಿನಿಮಾದಲ್ಲಿ ಅರ್ಚನಾ ಜೋಯಿಸ್ ಪತ್ರಕರ್ತೆಯಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ.

-masthmagaa.com

Contact Us for Advertisement

Leave a Reply