masthmagaa.com:
ಜಾನುವಾರ ವ್ಯಾಪಾರಿ ಇದ್ರೀಷ್ ಪಾಷಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪುನೀತ್ ಕೆರೆಹಳ್ಳಿ ಸೇರಿದಂತೆ 5 ಜನರನ್ನ ರಾಮನಗರ ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ಕೊಲೆ ಕೇಸ್ ದಾಖಲಾದ ಹಿನ್ನಲೆ ಆರೋಪಿಗಳು ರಾಜ್ಯ ಬಿಟ್ಟು ಪಲಾಯನ ಮಾಡಿದ್ರು. ಅವ್ರನ್ನ ಬಂಧಿಸಲು ಪೊಲೀಸರ 4 ತಂಡಗಳನ್ನ ರಚಿಸಲಾಗಿತ್ತು. ಇದೀಗ ರಾಜಸ್ಥಾನದಲ್ಲಿ ಅರೆಸ್ಟ್ ಮಾಡಿದ್ದು, ಕರೆತರಲಾಗ್ತಿದೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.
-masthmagaa.com
Contact Us for Advertisement