ಕಾಂಗ್ರೆಸ್‌ ಮೈತ್ರಿಕೂಟದ ವಿರುದ್ಧ ಅಖಿಲೇಶ್‌ ಯಾದವ್‌ ವಾಗ್ದಾಳಿ!

masthmagaa.com:

ಮಧ್ಯಪ್ರದೇಶದ ಚುನಾವಣೆಯ ಮೈತ್ರಿ ವಿಚಾರದಲ್ಲಿ ತೀವ್ರ ಅಸಮಧಾನಗೊಂಡ ಸಮಾಜವಾಧಿ ಪಕ್ಷದ ಅಖಿಲೇಶ್‌ ಯಾದವ್‌ ಕಾಂಗ್ರೆಸ್‌ಗೆ ವಾರ್ನಿಂಗ್‌ ನೀಡಿದ್ದಾರೆ. ʻಬಿಜೆಪಿ ಬಹುದೊಡ್ಡ ಮತ್ತು ಅತ್ಯಂತ ಸಂಘಟಿತವಾದ ಪಕ್ಷವಾಗಿದೆ. ಆದ್ದರಿಂದ ಈ ಪ್ರಬಲ ಪಕ್ಷವನ್ನ ಎದುರಿಸಲು ಇಂಡಿಯಾ ಮೈತ್ರಿಕೂಟದಲ್ಲಿ ಯಾವುದೇ ಗೊಂದಲಗಳಿರಬಾರದು. ಬಿಜೆಪಿ ವಿರುದ್ಧ ಮನಸ್ಸಿನಲ್ಲಿ ಗೊಂದಲವನ್ನ ಇಟ್ಟುಕೊಂಡು ಹೋರಾಡಿದರೆ ಕಾಂಗ್ರೆಸ್‌ ಯಶಸ್ವಿಯಾಗೋದಿಲ್ಲ ಅಂತ ಎಚ್ಚರಿಕೆಯನ್ನ ನೀಡಿದ್ದಾರೆ. ಇನ್ನು ಕಾಂಗ್ರೆಸ್‌ ಸ್ಥಾನಗಳನ್ನು ನೀಡಲು ಬಯಸದಿದ್ದರೆ, ಅದನ್ನ ಮೊದಲೇ ಹೇಳಬೇಕಿತ್ತು. ಕಾಂಗ್ರೆಸ್‌ ಹೀಗೆ ಮಾಡಿದರೆ, ಅವರನ್ನ ಯಾರು ನಂಬುತ್ತಾರೆ? ಅಂತ ಕಾಂಗ್ರೆಸ್‌ ಮೈತ್ರಿಕೂಟ ಛಿದ್ರವಾಗುತ್ತಿರೋ ಹಿನ್ನಲೆಯಲ್ಲಿ ಟೀಕಾ ಪ್ರಹಾರವನ್ನ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply