masthmagaa.com:
ಬೆಂಗಳೂರಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ ಚಲಿಸುತ್ತಿದ್ದ ಬಸ್ನಲ್ಲಿ ಅಪರಿಚಿತ ವ್ಯಕ್ತಿ ಮುತ್ತು ಕೊಟ್ಟು, ಅನುಚಿತವಾಗಿ ವರ್ತಿಸಿ ಬಳಿಕ ಎಸ್ಕೇಪ್ ಆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಂದ್ಹಾಗೆ ಗಣೇಶ ಚತುರ್ಥಿ ರಜೆ ಮುಗಿಸಿ ಯುವತಿ ಬಳ್ಳಾರಿಯಿಂದ ಬೆಂಗಳೂರಿಗೆ ಕೆಎಸ್ಆರ್ಟಿಸಿ ಎಸಿ ಬಸ್ನಲ್ಲಿ ಬರ್ತಿದ್ದಳು. ಈ ವೇಳೆ ವ್ಯಕ್ತಿ ಅನುಚಿತವಾಗಿ ವರ್ತಿಸಿ, ಟಿ ದಾಸರಹಳ್ಳಿ-ಜಾಲಹಳ್ಳಿ ಬಳಿ ಬಸ್ನಿಂದ ಇಳಿದು ಓಡಿ ಹೋಗಿದ್ದಾನೆ ಅಂತ ವರದಿಯಾಗಿದೆ. ಈ ಸಂಬಂಧ ಯುವತಿ ದೂರು ದಾಖಲಿಸಿದ್ದಾಳೆ. ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-masthmagaa.com
Contact Us for Advertisement