40% ಸರ್ಕಾರವನ್ನ ಕಿತ್ತೊಗೆಯಲು ಕರ್ನಾಟಕಕ್ಕೆ ಬಂದಿದ್ದೇನೆ : ಕೇಜ್ರಿ

masthmagaa.com:

ಕರ್ನಾಟಕ ರಾಜ್ಯದಲ್ಲಿರೊ 40% ಸರ್ಕಾರವನ್ನ ಕಿತ್ತೊಗೆಯಬೇಕು. ಅದಕ್ಕಾಗಿ ನಾವು ಇಲ್ಲಿಗೆ ಬಂದಿದ್ದೇವೆ ಅಂತ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಬಿಜೆಪಿ ವಿರುದ್ದ ವಾಗ್ದಾಳಿ ಮಾಡಿದ್ದಾರೆ. ದಾವಣಗೆರೆಯಲ್ಲಿ ಆಪ್‌ನ ಬಹಿರಂಗ ಸಭೆಯಲ್ಲಿ ಭಾಗಿಯಾಗೋಕೆ ಕೇಜ್ರಿವಾಲ್‌ ಹಾಗೂ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ರಾಜ್ಯಕ್ಕೆ ಆಗಮಿಸಿದ್ದಾರೆ. ಈ ವೇಳೆ ಆಪ್‌ ಸಮಾವೇಶವನ್ನ ಉದ್ಘಾಟಿಸಿ ಮಾತಾಡಿದ ಕೇಜ್ರಿವಾಲ್‌, ʻದಿಲ್ಲಿಯಲ್ಲಿ 12 ಲಕ್ಷ ಹಾಗೂ ಪಣಜಾಬ್‌ನಲ್ಲಿ 77 ಸಾವಿರ ಮಂದಿಗೆ ಉದ್ಯೋಗ ನೀಡಿದ್ದೇವೆ. ಕರ್ನಾಟಕದಲ್ಲಿ ಅಧಿಕಾರಿ ನೀಡಿದ್ರೆ ದಿಲ್ಲಿಯಲ್ಲಿ ಮಾಡಿರೊ ಎಲ್ಲ ಯೋಜನೆಗಳನ್ನ ಇಲ್ಲೂ ಜಾರಿಗೆ ತಂದು ಮಾದರಿ ರಾಜ್ಯವನ್ನಾಗಿ ಮಾಡುತ್ತೇವೆ. ಅದಕ್ಕಾಗಿ 40% ಸರ್ಕಾರ ಕಿತ್ತೊಗೆದು 0% ಸರ್ಕಾರ ನಡೆಸುವ ಆಪ್‌ನ್ನ ಅಧಿಕಾರಕ್ಕೆ ತನ್ನಿʼ ಅಂತ ಕನ್ನಡ ಜನತೆಗೆ ಕರೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply