masthmagaa.com:
ದಕ್ಷಿಣ ಕನ್ನಡದ ಮೂಡಬಿದ್ರೆ ಬಳಿ ಹಿಂದೂ ಸಂಘಟನೆಯ ಮುಖಂಡರಿಂದ ನೈತಿಕ ಪೊಲೀಸ್ಗಿರಿ ನಡೆದಿದೆ. ಅಲ್ಟೋ ಕಾರೊಂದರಲ್ಲಿ ವ್ಯಕ್ತಿಯೋರ್ವ ತನ್ನ ಹೆಂಡತಿ ಹಾಗೂ ಇಬ್ಬರು ಅನ್ಯಕೋಮಿನ ಯುವತಿಯರೊಂದಿಗೆ ಹೋಗ್ತಿದ್ರು. ಕಾರು ತಡೆದ ಹಿಂದೂ ಕಾರ್ಯಕರ್ತರು, ಯುವತಿಯರನ್ನ ಪ್ರಶ್ನಿಸಿದ್ದಾರೆ. ಈ ಸಂಬಂಧ ಸಮಿತ್ ರಾಜ್ ಮತ್ತು ಸಂದೀಪ್ ಪೂಜಾರಿ ಎಂಬುವವರನ್ನ ಮೂಡಬಿದ್ರೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಉಳಿದವರಿಗಾಗಿ ಶೋಧಕಾರ್ಯನಡೆಸುತ್ತಿದ್ದಾರೆ.
ಮತ್ತೊಂದ್ಕಡೆ ಮಂಡ್ಯ ಜಿಲ್ಲೆಯ ಸುಂಡಹಳ್ಳಿಯಲ್ಲೂ ನೈತಿಕ ಪೊಲೀಸ್ ಗಿರಿ ನಡೆದಿದೆ. ಬೈಕ್ನಲ್ಲಿ ಹೋಗುತ್ತಿದ್ದ ಹುಡುಗ ಹುಡುಗಿಯನ್ನು ಭಜರಂಗದಳ ಕಾರ್ಯಕರ್ತರು ಅಡ್ಡಗಟ್ಟಿದ್ದಾರೆ. ಅನ್ಯಕೋಮಿನ ಹುಡುಗನಿಗೆ ವಾರ್ನಿಂಗ್ ಮಾಡಿ ಕಳುಹಿಸಿದ್ದು, ಹುಡುಗಿಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ.
-masthmagaa.com
Contact Us for Advertisement