ರಾಜ್ಯದಲ್ಲಿ ಒಂದೇ ದಿನ ಎರಡೆರಡು ಕಡೆ ನೈತಿಕ ಪೊಲೀಸ್​​ಗಿರಿ!

masthmagaa.com:

ದಕ್ಷಿಣ ಕನ್ನಡದ ಮೂಡಬಿದ್ರೆ ಬಳಿ ಹಿಂದೂ ಸಂಘಟನೆಯ ಮುಖಂಡರಿಂದ ನೈತಿಕ ಪೊಲೀಸ್‌ಗಿರಿ ನಡೆದಿದೆ. ಅಲ್ಟೋ ಕಾರೊಂದರಲ್ಲಿ ವ್ಯಕ್ತಿಯೋರ್ವ ತನ್ನ ಹೆಂಡತಿ ಹಾಗೂ ಇಬ್ಬರು ಅನ್ಯಕೋಮಿನ ಯುವತಿಯರೊಂದಿಗೆ ಹೋಗ್ತಿದ್ರು. ಕಾರು ತಡೆದ ಹಿಂದೂ ಕಾರ್ಯಕರ್ತರು, ಯುವತಿಯರನ್ನ ಪ್ರಶ್ನಿಸಿದ್ದಾರೆ. ಈ ಸಂಬಂಧ ಸಮಿತ್ ರಾಜ್ ಮತ್ತು ಸಂದೀಪ್‌ ಪೂಜಾರಿ ಎಂಬುವವರನ್ನ ಮೂಡಬಿದ್ರೆ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಉಳಿದವರಿಗಾಗಿ ಶೋಧಕಾರ್ಯನಡೆಸುತ್ತಿದ್ದಾರೆ.

ಮತ್ತೊಂದ್ಕಡೆ ಮಂಡ್ಯ ಜಿಲ್ಲೆಯ ಸುಂಡಹಳ್ಳಿಯಲ್ಲೂ ನೈತಿಕ ಪೊಲೀಸ್ ಗಿರಿ ನಡೆದಿದೆ. ಬೈಕ್​​ನಲ್ಲಿ ಹೋಗುತ್ತಿದ್ದ ಹುಡುಗ ಹುಡುಗಿಯನ್ನು ಭಜರಂಗದಳ ಕಾರ್ಯಕರ್ತರು ಅಡ್ಡಗಟ್ಟಿದ್ದಾರೆ. ಅನ್ಯಕೋಮಿನ ಹುಡುಗನಿಗೆ ವಾರ್ನಿಂಗ್ ಮಾಡಿ ಕಳುಹಿಸಿದ್ದು, ಹುಡುಗಿಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ.

-masthmagaa.com

Contact Us for Advertisement

Leave a Reply