masthmagaa.com:
ಪಟಾಕಿ ಹೊಡೆಯೋ ವಿಚಾರಕ್ಕೆ ಗಲಾಟೆ ಶುರುವಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಗಳೂರಿನ ರಥಬೀದಿಯಲ್ಲಿ ನಡೆದಿದೆ. ವಿನಯ್ ಕಾಮತ್ ಮೃತ ವ್ಯಕ್ತಿ. ಚೂರಿ ಇರಿದ ಕೃಷ್ಣಾನಂದ ಕಿಣಿ ಮತ್ತು ಆತನ ಮಗ ಅಮಿತ್ ಕಿಣಿ ಎಂಬುವವರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಂದ್ಹಾಗೆ ಈ ಎರಡು ಕುಟುಂಬಗಳ ಮಧ್ಯೆ ಆಗಾಗ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ನಡೀತಿತ್ತಂತೆ. ಈಗ ಪಟಾಕಿ ಫೈಟ್ ಓರ್ವನ ಪ್ರಾಣವನ್ನೇ ತೆಗೆದುಕೊಂಡಿದೆ.
-masthmagaa.com
Contact Us for Advertisement