masthmagaa.com:
ಇಂಗ್ಲೆಂಡ್ ವಿರುದ್ದದ ಎರಡನೇ ಟೆಸ್ಟ್ ಮ್ಯಾಚ್ನಿಂದ ಇಬ್ಬರು ಭಾರತೀಯ ಆಟಗಾರರು ಹೊರಗುಳಿಯಲಿದ್ದಾರೆ ಅಂತ ಬಿಸಿಸಿಐ ಹೇಳಿದೆ. ರವೀಂದ್ರ ಜಡೇಜಾ ಮತ್ತು ಕನ್ನಡಿಗ ಕೆ.ಎಲ್.ರಾಹುಲ್ ಇವರಿಬ್ಬರು ಗಾಯದ ಸಮಸ್ಯೆಯಿಂದ ಬಳಲ್ತಿದಾರೆ. ಹೀಗಾಗಿ ವಿಶಾಖ ಪಟ್ಟಣಂ ಟೆಸ್ಟ್ನಿಂದ ಡ್ರಾಪ್ ಆಗಿದ್ದಾರೆ ಅಂತ BCCI ತಿಳಿಸಿದೆ. ಹೀಗಾಗಿ ಇವ್ರ ಬದಲಿಗೆ ಆಯ್ಕೆ ಸಮಿತಿ ಸರ್ಫರಾಜ್ ಖಾನ್, ಸೌರಭ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ನ್ನ ಎರಡನೇ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿದೆ. ಅಂದ್ಹಾಗೆ ಫೆಬ್ರುವರಿ 2ರಿಂದ ವಿಶಾಖಪಟ್ಟಣಂನಲ್ಲಿ ಭಾರತ-ಇಂಗ್ಲೆಂಡ್ ಮಧ್ಯೆ ದ್ವಿತೀಯ ಟೆಸ್ಟ್ ನಡೆಯಲಿದೆ.
-masthmagaa.com
Contact Us for Advertisement