masthmagaa.com:
ಖಲಿಸ್ಥಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕೇಸ್ನ ತನಿಖೆಯಲ್ಲಿ ಭಾರತ ನಮಗೆ ಸಹಕಾರ ಕೊಡ್ತಿದೆ ಅಂತ ಕೆನಡಾ ಹೇಳಿದೆ. ಟ್ರುಡು ಸರ್ಕಾರದ ಭದ್ರತಾ ಸಲಹೆಗಾರ ಜೋಡಿ ಥಾಮಸ್ ಈ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಭಾರತ ಹಾಗೂ ಕೆನಡಾ ಸಂಬಂಧದಲ್ಲಿ ಕೆಲವು ಡೆವಲಪ್ಮೆಂಟ್ ಕಾಣ್ತಾ ಇದೆ. ಭಾರತ ಕೊಆಪರೇಟ್ ಮಾಡ್ತಿದೆ ಅಂತೇಳಿದ್ದಾರೆ. ಅಲ್ಲದೆ, ಇಂಡೋ ಪೆಸಿಫಿಕ್ನಲ್ಲಿ ನಾವು ಸಕ್ರಿಯವಾಗಿರ್ಬೇಕು ಅಂದ್ರೆ, ಭಾರತದ ಜೊತೆ ಒಳ್ಳೇ ಸಂಬಂಧ ಇರೋದು ಮುಖ್ಯ ಆಗುತ್ತೆ. ಹಾಗಾಗಿ ನಾವು ಉಭಯ ದೇಶಗಳ ಸಂಬಂಧ ಗಟ್ಟಿ ಮಾಡೋ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದೇವೆ ಅಂದಿದ್ದಾರೆ.
-masthmagaa.com
Contact Us for Advertisement