masthmagaa.com:

ಭಾರತ-ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ವೇಳೆ ಟೀಂ ಇಂಡಿಯಾ ವೇಗಿಗಳಾದ ಜಸ್ಪ್ರಿತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಜನಾಂಗೀಯ ನಿಂದನೆಗೆ ಒಳಗಾಗಿದ್ದಾರೆ. 3ನೇ ಟೆಸ್ಟ್​ನ 2 ಮತ್ತು 3ನೇ ದಿನ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಬೂಮ್ರಾ ಮತ್ತು ಸಿರಾಜ್​ರನ್ನ ಜನಾಂಗೀಯವಾಗಿ ನಿಂದಿಸಿದ್ದಾರೆ. ಈ ಬಗ್ಗೆ ಇಬ್ಬರು ವೇಗಿಗಳು ನಾಯಕ ಅಜಿಂಕ್ಯ ರಹಾನೆ ಬಳಿ ಹೇಳಿಕೊಂಡಿದ್ದಾರೆ. ಇವತ್ತು ದಿನದಾಟ ಮುಗಿದ ಬಳಿ ನಾಯಕ ರಹಾನೆ, ಆರ್​.ಅಶ್ವಿನ್, ಬೂಮ್ರಾ, ಸಿರಾಜ್ ಅಂಪೈರ್​ಗಳು ಮತ್ತು ಸಿಡ್ನಿ ಕ್ರಿಕೆಟ್​ ಗ್ರೌಂಡ್​ನ ಭದ್ರತಾ ಸಿಬ್ಬಂದಿ ಬಳಿ ಮಾತನಾಡಿದ್ದಾರೆ. ಬಳಿಕ ಟೀಂ ಇಂಡಿಯಾ ಈ ಕುರಿತು ಅಧಿಕೃತವಾಗಿ ದೂರು ದಾಖಲಿಸಿದೆ ಎನ್ನಲಾಗ್ತಿದೆ. ಈ ಹಿಂದೆ ಕೂಡ ಭಾರತ-ಆಸ್ಟ್ರೇಲಿಯಾ ನಡುವೆ ಪಂದ್ಯಗಳು ನಡೆದಾಗ ಇಂತಹ ಘಟನೆ ನಡೆದಿರುವ ಉದಾಹರಣೆ ಇದೆ.

-masthmagaa.com

Contact Us for Advertisement

Leave a Reply