masthmagaa.com:
ಕೊರೋನಾ ಎರಡನೇ ಅಲೆಗೆ ತತ್ತರಿಸುತ್ತಿರೋ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 53,476 ಜನರಿಗೆ ಸೋಂಕು ತಗುಲಿದೆ. 153 ದಿನಗಳ ಬಳಿಕ ಅಂದ್ರೆ 5 ತಿಂಗಳ ಬಳಿಕ ದೃಢಪಟ್ಟ ಅತಿಹೆಚ್ಚು ಪ್ರಕರಣ ಇದಾಗಿದೆ. ಹಾಗೇ 251 ಸೋಂಕಿತರು ಮೃತಪಟ್ಟಿದ್ದಾರೆ. ಗುಣಮುಖ ಆಗಿರೋದು ಕೇವಲ 26,490 ಸೋಂಕಿತರು ಅಷ್ಟೇ.
ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 31 ಸಾವಿರ ಜನರಿಗೆ ಸೋಂಕು ತಗುಲಿದೆ. ಕಳೆದ ವರ್ಷದ ನಂಬರ್ಸ್ ಅನ್ನೂ ಕೂಡ ಪರಿಗಣಿಸಿದ್ರೆ ಇದುವರೆಗಿನ ಹೈಯೆಸ್ಟ್ ಇದು. ಮುಂಬೈ ಒಂದರಲ್ಲೇ 5 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ.
ಇನ್ನು ದೇಶದಲ್ಲಿ ಸಕ್ರಿಯ ಪ್ರಕರಣ ಹೆಚ್ಚಿರುವ 10 ಜಿಲ್ಲೆಗಳನ್ನ ಕೇಂದ್ರ ಆರೋಗ್ಯ ಇಲಾಖೆ ಗುರುತಿಸಿದೆ. ಇದರಲ್ಲಿ 9 ಜಿಲ್ಲೆಗಳು ಮಹಾರಾಷ್ಟ್ರದ್ದೇ ಆಗಿದ್ದರೆ, ಒಂದು ಜಿಲ್ಲೆ ಕರ್ನಾಟಕದ್ದಾಗಿದೆ. ಅದೇ ಬೆಂಗಳೂರು ನಗರ..
ಟಾಪ್-10 ಜಿಲ್ಲೆಗಳು:
- ಪುಣೆ – 43,000+
- ನಾಗ್ಪುರ್ – 33,000+
- ಮುಂಬೈ – 26,000+
- ಥಾಣೆ – 22,000+
- ನಾಸಿಕ್ – 15,000+
- ಔರಂಗಬಾದ್ – 15,000+
- ಬೆಂಗಳೂರು – 10,000+
- ನಾಂದೆಡ್ – 10,000+
- ಜಲ್ಗಾಂವ್ – 6,000+
- ಅಕೋಲ – 5,000+
-masthmagaa.com
Contact Us for Advertisement