masthmagaa.com:
ಮೇಘಾಲಯದಲ್ಲಿ ನಡೆಯಲಿರೋ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವ್ರು ಇಂದು ರೋಡ್ ಶೋ ನಡೆಸಿದ್ದಾರೆ. ಈ ಬಾರಿ 60 ಕ್ಷೇತ್ರಗಳಲ್ಲೂ ಬಿಜೆಪಿ ಸ್ಪರ್ಧಿಸಲಿದ್ದು, ಫೆಬ್ರುವರಿ 27ರಂದು ಚುನಾವಣೆ ನಡೆಯಲಿದೆ. ಇದೇ ವೇಳೆ ಸಮಾವೇಶದಲ್ಲಿ ಮಾತಾಡಿದ ಮೋದಿ, ಕಾಂಗ್ರೆಸ್ ನೀಡಿರೋ ‘ಮೋದಿ ತೇರಿ ಕಬ್ರ ಖುದೇಗಿ’ (ಮೋದಿ, ನಿಮಗೆ ಸಮಾಧಿ ತೋಡಲಾಗುತ್ತದೆ) ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಯಾರನ್ನ ರಾಷ್ಟ್ರ ಮತ್ತೆ ಸ್ವೀಕರಿಸಲು ಸಿದ್ಧವಿಲ್ಲವೋ ಅವರು ಈಗ, ‘ಮೋದಿ ತೇರಿ ಕಬ್ರ ಖುದೇಗಿ’ ಅಂತ ಹೇಳ್ತಿದ್ದಾರೆ. ಆದರೆ ದೇಶ ಮತ್ತು ಜನರು ‘ಮೋದಿ ತೇರಾ ಕಮಲ್ ಖಿಲೇಗಾ’ (ಮೋದಿ, ನಿಮ್ಮ ಕಮಲ ಅರಳಲಿದೆ) ಎನ್ನುತ್ತಿದ್ದಾರೆ ಅಂತ ಮೋದಿ ಹೇಳಿದ್ದಾರೆ.
-masthmagaa.com
Contact Us for Advertisement