ಭಾರತಕ್ಕೆ ಬರಲು ನಿರಾಕರಿಸಿದ ಅಫ್ಘನ್​ನಲ್ಲಿರೋ ಹಿಂದೂ-ಸಿಖ್!

masthmagaa.com:

ಭಾರತ ನಿರಂತರವಾಗಿ ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರೋರನ್ನು ಕರೆತರೋ ಕೆಲಸ ಮಾಡ್ತಿದೆ. ಆದ್ರೆ ಕಾಬೂಲ್​​​​​ನ ಕರ್ತೇ ಪರ್ವಾನ್ ಗುರುದ್ವಾರದಲ್ಲಿ ಇನ್ನೂ ಕೂಡ 70ರಿಂದ 80 ಮಂದಿ ಹಿಂದೂಗಳು ಸಿಲುಕಿದ್ದಾರೆ. ಇವರಿಗೆ ನಮ್ಮಲ್ಲಿಗೆ ಬರೋದಾದ್ರೆ ಬನ್ನಿ ಅಂತ ಭಾರತ ಕರೆದಿದೆ. ಆದ್ರೆ ಇವರು ಈಗಾಗಲೇ ಎರಡೆರಡು ಭಾರಿ ಬರ್ತೀವಿ ಅಂತ ಹೇಳಿ, ಕೊನೆ ಕ್ಷಣದಲ್ಲಿ ಫ್ಲೈಸ್ ಮಿಸ್ ಮಾಡಿಕೊಂಡಿದ್ದಾರೆ. ಯಾಕಂದ್ರೆ ಕೆನಡಾ ಅಥವಾ ಅಮೆರಿಕಗೆ ಹೋಗ್ಬೇಕು ಅನ್ನೋದು ಅವರ ಪ್ಲಾನ್. ಸದ್ಯ ನಿರಾಶ್ರಿತರ ರೂಪದಲ್ಲಿ ಈ ದೇಶಗಳಿಗೆ ಹೋಗಿ ನಂತರದಲ್ಲಿ ಅಲ್ಲಿನ ನಾಗರಿಕತ್ವ ಪಡೆದುಕೊಳ್ಳಬಹುದು ಅನ್ನೋದು ಇವರ ಯೋಜನೆ. ನಾವು ಸದ್ಯದಲ್ಲೇ ಸ್ಥಳಾಂತರ ಪ್ರಕ್ರಿಯೆ ನಿಲ್ಲಿಸ್ತೀವಿ. ಆಮೇಲೆ ವಿಮಾನ ಇರಲ್ಲ. ಬೇಗ ಡಿಸೈಡ್ ಮಾಡಿ ಅಂತ ಭಾರತ ಈಗಾಗಲೇ ತಾಕೀತು ಮಾಡಿದೆ. ಅಂದಹಾಗೆ ಇವರೆಲ್ಲಾ ಭಾರತದ ಪ್ರಜೆಗಳಲ್ಲ. ಅಫ್ಘಾನಿಸ್ತಾನದಲ್ಲಿರೋ ಹಿಂದೂ-ಸಿಖ್ ಸಮುದಾಯದವರು.. ಇಂಥವರನ್ನು ಕರ್ಕೊಂಡು ಬರೋಕೆ ಭಾರತ ಟೈಂ ವೇಸ್ಟ್ ಮಾಡದೇ ಇರೋದೇ ಒಳ್ಳೆಯದು ಅನ್ನೋದು ನಮ್ಮ ಅಭಿಪ್ರಾಯ.

-masthmagaa.com

Contact Us for Advertisement

Leave a Reply