masthmagaa.com:
ಭಾರತ-ಕೆನಡಾ ಮಧ್ಯದ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೇ, ಭಾರತದ ಜೊತೆ ಕೆನಡಾ ಸಂಪರ್ಕದಲ್ಲಿದೆ ಅಂತ ಕೆನಡಾ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಹೇಳಿದ್ದಾರೆ. ಟೊರೊಂಟೊದಲ್ಲಿ ನಡೆದ ಈವೆಂಟ್ ಒಂದ್ರಲ್ಲಿ ಮಾತನಾಡಿರೋ ಮೆಲಾನಿ, ನಾನು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವ್ರೊಂದಿಗೆ ಕಾಂಟ್ಯಾಕ್ಟ್ನಲ್ಲಿದ್ದು, ಇದನ್ನ ಕಂಟಿನ್ಯೂ ಮಾಡೋದ್ರಲ್ಲಿದ್ದೇನೆ. ಸದ್ಯ ಕೆನಡಾ ಮತ್ತು ಭಾರತದ ನಡುವಿನ ಸಂಬಂಧ ಸಾಕಷ್ಟು ಸವಾಲುಗಳನ್ನ ಫೇಸ್ ಮಾಡ್ತಾ ಇದೆ. ಆದ್ರೆ ನಾವು ನಮ್ಮ ನಿರ್ಧಾರಕ್ಕೆ ದೃಢವಾಗಿದ್ದೇವೆ. ಯಾಕಂದ್ರೆ ಇದು ರಾಷ್ಟ್ರದ ಸಾರ್ವಭೌಮತ್ವ ಮತ್ತು ಕೆನಡಾ ಪ್ರಜೆಗಳ ರಕ್ಷಣೆಯ ಸವಾಲಾಗಿದೆ ಅಂತ ಹೇಳಿದ್ದಾರೆ.
-amsthmagaa.com
Contact Us for Advertisement