ಕೆನಡದಲ್ಲಿರೊ ಭಾರತೀಯರಿಗೆ ಭಾರತ ಸರ್ಕಾರದಿಂದ ಸಲಹೆ!

masthmagaa.com:

ಕೆನಡದಲ್ಲಿ ದ್ವೇಷ ಅಪರಾಧಗಳು, ಭಾರತ ವಿರೋಧಿ ಚಟುವಟಿಕೆಗಳು ದಿನೇ ದಿನೇ ಹೆಚ್ಚಾಗ್ತಿವೆ. ಇದರ ಹಿನ್ನಲೆಯಲ್ಲಿ ಅಲ್ಲಿರೊ ಭಾರತೀಯರಿಗೆ ಹಾಗೂ ಅಲ್ಲಿಗೆ ಹೋಗ್ತಿರೊ ವಿದ್ಯಾರ್ಥಿ ಹಾಗೂ ಪ್ರವಾಸಿಗರಿಗೆ ಎಚ್ಚರಿಕೆಯಿಂದಿರಿ ಅಂತ ಭಾರತ ಸರ್ಕಾರ ಅಡ್ವೈಸರಿ ಬಿಡುಗಡೆ ಮಾಡಿದೆ. ಹಾಗೂ ಕೆನಡ ರಾಜಧಾನಿ ಒಟ್ಟಾವನಲ್ಲಿರೋ ಭಾರತೀಯ ಕಚೇರಿಯಲ್ಲಿ ತಮ್ಮ ಹೆಸರುಗಳನ್ನ ನೊಂದಾಯಿಸಿಕೊಳ್ಳಿ ಅಂತ ಸೂಚಿಸಿದೆ. ಇದ್ರಿಂದ ತುರ್ತು ಪರಿಸ್ಥಿಯಲ್ಲಿ ಭಾರತೀಯರನ್ನ ಸಂಪರ್ಕಿಸೋಕೆ ಈಸಿ ಆಗುತ್ತೆ ಅಂತ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ. ಇದರ ಜೊತೆಗೆ ದ್ವೇಷ ಅಪರಾಧಗಳ ಬಗ್ಗೆ ತನಿಖೆ ನಡೆಸಿ, ಸರಿಯಾದ ಕ್ರಮ ಕೈಗೊಳ್ಳಬೇಕು ಅಂತ ಕೆನಡ ಅಧಿಕಾರಿಗಳಿಗೆ ಭಾರತ ಆಗ್ರಹ ಮಾಡಿದೆ.

-masthmagaa.com

Contact Us for Advertisement

Leave a Reply