masthmagaa.com:
ಕೆನಡಾ ಮಣ್ಣಿನಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ನ ಹತ್ಯೆಯಾಗಿ…ಕೆನಡಾ ಸರ್ಕಾರ ಭಾರತಕ್ಕೆ ಆರೋಪದ ಹಣೆಪಟ್ಟಿ ಅಂಟಿಸಿತ್ತು. ಇದೀಗ ನಿಜ್ಜರ್ನ ಹತ್ಯೆಯಾಗಿ 10 ತಿಂಗಳ ನಂತ್ರ….ಪುನಃ ಕೆನಾಡದಲ್ಲಿ ಮತ್ತೊಂದು ಹತ್ಯೆ ಪ್ರಕರಣ ಸಂಬಂಧ ಭಾರತದ ಗ್ಯಾಂಗ್ಸ್ಟರ್ಗಳ ಹೆಸರು ಕೇಳಿ ಬರ್ತಿದೆ. ಬೂಟಾ ಸಿಂಗ್ ಗಿಲ್ ಅನ್ನೋ ಕೆನಡಾದ ಗುರುದ್ವಾರ ಒಂದ್ರ ಅಧ್ಯಕ್ಷರನ್ನ ಇತ್ತೀಚಿಗೆ ಹತ್ಯೆ ಮಾಡಲಾಗಿತ್ತು. ಅಲ್ಲಿನ ಎಡ್ಮಂಟನ್ನಲ್ಲಿರೋ ಮಿಲ್ ವುಡ್ಸ್ ಏರಿಯಾದಲ್ಲಿ ಏಪ್ರಿಲ್ 08ರಂದು ಈತ ಗುಂಡಿನ ಏಟಿಗೆ ಹತ್ಯೆಯಾಗಿದ್ದ. ಈತನ ಹತ್ಯೆಗೆ ಇದೀಗ ಭಾರತದ ಹೆಸರು ತಳುಕು ಹಾಕಿಕೊಂಡಿದೆ. ಕೆನಡಾ ಮೂಲಗಳ ಪ್ರಕಾರ, ಭಾರತೀಯ ಗ್ಯಾಂಗ್ಸ್ಟರ್ಗಳು ಖಲಿಸ್ತಾನಿ ಬೆಂಬಲಿಗರೊಂದಿಗೆ ಸೇರ್ಕೊಂಡು ಈ ಹತ್ಯೆ ಮಾಡಿದ್ದಾರೆ ಎನ್ನಲಾಗ್ತಿದೆ. ಅಲ್ದೇ ಈ ಗ್ಯಾಂಗ್ಸ್ಟರ್ಗಳು ಕೆನಡಾದಲ್ಲಿ ವಾಸಿಸ್ತಿರೋ ಭಾರತೀಯ ಮೂಲದ ಶ್ರಿಮಂತ ಜನರಿಂದ ಬಲವಂತವಾಗಿ ಹಣ ವಸೂಲಿ ಮಾಡ್ತಿದ್ದಾರೆ ಅಂತಾನೂ ಆರೋಪಿಸಲಾಗಿದೆ. ಇನ್ನು ಈ ಹತ್ಯೆಯ ಲೋಕಲ್ ರಿಪೋರ್ಟ್ಗಳ ಪ್ರಕಾರ, ಬೂಟಾ ಸಿಂಗ್ ಗಿಲ್ ಜೊತೆ ಈ ದಾಳಿಯ ಆರೋಪಿ ಅಂತ ಹೇಳಲಾಗ್ತಿರೋ ನಿಕ್ ಧಾಲಿವಾಲ್ ಎಂಬಾತನೂ ಗುಂಡಿನ ಏಟಿಗೆ ಮೃತಪಟ್ಟಿದ್ದಾನೆ. ಅಲ್ದೇ ಸಿವಿಲ್ ಎಂಜಿನಿಯರ್ ಸರ್ಬಜಿತ್ ಸಿಂಗ್ ಅನ್ನೋರು ಕೂಡ ಗುಂಡಿನ ಚಕಮಕಿಯಲ್ಲಿ ಬಹಳ ಸೀರಿಯಸ್ ಆಗಿ ಗಾಯಗೊಂಡಿದ್ದಾನೆ….ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಹೀಗಂತ ಅಲ್ಲಿನ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂದ್ಹಾಗೆ ಭಾರತೀಯ ಮೂಲದ ಕೆನಡಾ ಜನರು ಶ್ರೀಮಂತ ಬಿಲ್ಡರ್ಸ್ಗಳನ್ನ ಟಾರ್ಗೆಟ್ ಮಾಡಿ ಬಲವಂತವಾಗಿ ಹಣ ವಸೂಲಿ ಮಾಡ್ತಿದೆ ಅಂತ ಕೆನಡಾ ಪೊಲೀಸರು ಈ ಹಿಂದೆ ಆರೋಪಿಸಿದ್ರು. ಇದಕ್ಕೆ ಅಲ್ಲಿ ಒಂದಷ್ಟು ಆಕ್ಷೇಪಗಳೂ ಕೇಳಿ ಬಂದಿದ್ವು.
-masthmagaa.com
Contact Us for Advertisement