masthmagaa.com:
ಕತಾರ್ನಲ್ಲಿ ಬೇಹುಗಾರಿಕೆ ನಡೆಸಿದ್ದ ಆರೋಪದ ಮೇಲೆ ಅರೆಸ್ಟ್ ಆಗಿದ್ದ ಭಾರತೀಯ ನೌಕಾ ಸಿಬ್ಬಂದಿ ಫೆಬ್ರುವರಿನಲ್ಲಿ ರಿಲೀಸ್ ಆಗಿದ್ರು. ಈ ಪೈಕಿ ಕ್ಯಾಪ್ಟನ್ ಸೌರಭ್ ವಸಿಷ್ಠ್ ಅನ್ನೋ ನೌಕಾ ಸಿಬ್ಬಂದಿ ಈಗ ಪ್ರಧಾನಿ ಮೋದಿಯವ್ರಿಗೆ ಪತ್ರ ಬರೆದು ಥ್ಯಾಂಕ್ಸ್ ಹೇಳಿದ್ದಾರೆ. ʻಕತಾರ್ ಬಂಧನದಿಂದ ಹೊರಬರೋಕೆ ಆಗೋದೇ ಇಲ್ಲ… ಯಾವ್ದೇ ದಾರಿ ಇಲ್ಲದಾಗ, ನೀವು ನಂಬಿಕೆಯ ದಾರಿದೀಪವಾಗಿ ಬಂದ್ರಿ. ಯಾರೊಬ್ಬ ಭಾರತೀಯನೂ ಕೂಡ ಬಂಧನದಲ್ಲಿರಬಾರದು ಅಂತ ನೀವು ಮಾಡಿರೋ ಪ್ರತಿಜ್ಷೆ ನಡೆಸಿಕೊಟ್ರಿʼ ಅಂತ ಬರೆದಿದ್ದಾರೆ. ಇನ್ನು ಅವ್ರ ತಂದೆ ನಿವೃತ್ತ ವಿಂಗ್ ಕಮಾಂಡರ್ ರಾಜಿಂದರ್ ಕುಮಾರ್ ವಸಿಷ್ಠ್ ಅವ್ರು ಕೂಡ ಮೋದಿಯವ್ರ ಸಹಾಯಕ್ಕೆ ಅಭಿನಂದನೆ ತಿಳಿಸಿದ್ದಾರೆ. ʻಸುಮಾರು 18 ತಿಂಗಳ ಸಂಕಟದ ಸಮಯದಲ್ಲಿ ನೀವೊಬ್ಬರೇ ನಮಗೆ ಭರವಸೆಯಾಗಿ ನಿಂತಿದ್ರಿʼ ಅಂತೇಳಿದ್ದಾರೆ.
-masthmagaa.com
Contact Us for Advertisement