ತಜಕಿಸ್ತಾನದಲ್ಲಿ ಭಾರತ-ಪಾಕಿಸ್ತಾನ ಮಾತುಕತೆ ನಡೆಯುತ್ತಾ?

masthmagaa.com:

ಭಾರತದ ವಿದೇಶಾಂಗ ಮಂತ್ರಿ ಎಸ್ ಜೈಶಂಕರ್ ತಜಕಿಸ್ತಾನದಲ್ಲಿದ್ದಾರೆ. ಅಫ್ಘಾನಿಸ್ತಾ ಶಾಂತಿ ಸ್ಥಾಪನೆ ಸಂಬಂಧ 50ಕ್ಕೂ ಅಧಿಕ ದೇಶಗಳು ತಜಿಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ಸೇರಿದ್ದಾರೆ. ಈ ಸಭೆಯಲ್ಲಿ ಪಾಕ್ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಶಿ ಕೂಡ ಭಾಗಿಯಾಗಿದ್ದಾರೆ. ಹೀಗಾಗಿ ಇವರಿಬ್ಬರ ಅಫಿಶಿಯಲ್ ಅಥವಾ ಅನಫಿಶಿಯಲ್ ಭೇಟಿ ನಡೆಯುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಬಗ್ಗೆ ಪಾಕಿಸ್ತಾನ ಅಚ್ಚರಿಯ ರೀತಿಯಲ್ಲಿ ಮೃದುವಾಗಿ ಮಾತಾಡ್ತಿದೆ. ಶಾಂತಿ ಶಾಂತಿ ಅಂತಿದೆ. ಹೀಗಾಗಿ ಈ ಕುತೂಹಲ ಇದೆ. ಆದ್ರೆ ಪಾಕ್ ವಿದೇಶಾಂಗ ಮಂತ್ರಿ ಶಾ ಮಹಮದ್ ಖುರೇಶಿ ಮಾತ್ರ ಆ ಥರದ ಯಾವುದೇ ಭೇಟಿ ನಿಗದಿ ಆಗಿಲ್ಲ ಅಂದಿದ್ದಾರೆ.

-masthmagaa.com

Contact Us for Advertisement

Leave a Reply