masthmagaa.com:
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಗೆ ಬಾಂಗ್ಲಾ ಅಕಾಡೆಮಿ ಸಾಹಿತ್ಯ ಪ್ರಶಸ್ತಿ ನೀಡಿದೆ. ಈಗ ಇದು ವ್ಯಾಪಕ ಚರ್ಚಗೆ ಗುರಿಯಾಗಿದೆ. ಇದನ್ನು ವಿರೋಧಿಸಿ ಅಲ್ಲಿನ ಬಂಗಾಳಿ ಸಾಹಿತಿ ಮತ್ತು ಸಂಶೋಧಕಿ ರತ್ನ ರಶೀದ್ ಬ್ಯಾನರ್ಜಿ ಅವ್ರು ಬಾಂಗ್ಲಾ ಅಕಾಡೆಮಿಗೆ ತಮ್ಮ ಪ್ರಶಸ್ತಿಯನ್ನ ವಾಪಾಸ್ ನೀಡಿದ್ದಾರೆ. ಸಿಎಂಗೆ ಸಾಹಿತ್ಯ ಪ್ರಶಸ್ತಿ ನೀಡುವ ನಿರ್ಧಾರ ಲೇಖಕಿಯಾಗಿ ನನಗೆ ಅವಮಾನಕರ ಎನಿಸಿದೆ. ಇದನ್ನು ನಾನು ಸ್ವೀಕರಿಸೋಕಾಗಲ್ಲ. ಇದು ಕೆಟ್ಟ ನಿದರ್ಶನವಾಗುತ್ತೆ ಅಂತ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.
-masthmagaa.com
Contact Us for Advertisement