masthmagaa.com:
ಮಿಡ್ಲ್ ಈಸ್ಟ್ನಲ್ಲಿ ಆಗಾಗ ಸದ್ದು ಮಾಡೋ IS ಉಗ್ರರು ಈಗ ಭಾರತಕ್ಕೆ ಭಾರಿ ಬೆದರಿಕೆ ಹಾಕಿದ್ದಾರೆ. ರಾಮಮಂದಿರ ಹಾಗೂ ಗುಜರಾತ್ ಗಲಭೆ ಉಲ್ಲೇಖಿಸಿ, ಭಾರತಕ್ಕೆ ಹುಷಾರ್ ಅಂದಿದ್ದಾರೆ. ಜನವರಿ 30ರಂದು IS ಉಗ್ರರು ತಮ್ಮ ʻವಾಯ್ಸ್ ಆಫ್ ಖುರ್ಸಾನʼ ಆನ್ಲೈನ್ ಮ್ಯಾಗಜಿನ್ನಲ್ಲಿ ಭಾರತ ವಿರೋಧಿ ಆರ್ಟಿಕಲ್ ಒಂದನ್ನ ಪಬ್ಲಿಷ್ ಮಾಡಿದ್ದಾರೆ. ಈ ಆರ್ಟಿಕಲ್ ಈಗ ಸೋಷಿಯಲ್ ಮೀಡಿಯಾ ಹಾಗೂ ಡಾರ್ಕ್ ವೆಬ್ ಪ್ಲಾಟ್ಫಾರ್ಮ್ಗಳಲ್ಲಿ ಹರಿದಾಡಿದೆ. Would you desire me to slay him?’ ಅಂದ್ರೆ ನಾನು ಅವನನ್ನ ಕೊಲ್ಲಬೇಕು ಅಂತ ನೀವು ಬಯಸ್ತೀರ ಅನ್ನೋ ಟೈಟಲ್ ಜೊತೆ ಈ ಆರ್ಟಿಕಲ್ ಪ್ರಕಟವಾಗಿದೆ. ಇದ್ರಲ್ಲಿ ಮುಖ್ಯವಾಗಿ ಜಮ್ಮು ಕಾಶ್ಮೀರದ NIT ಶ್ರೀನಗರದ ಹಿಂದೂ ವಿದ್ಯಾರ್ಥಿಯೊಬ್ಬನ ಬಗ್ಗೆ ಬರೆಯಲಾಗಿದೆ. ಮೊಸಾಬ್ ಹಸನ್ ಅನ್ನೋ ವಿದ್ಯಾರ್ಥಿ ಪ್ರವಾದಿ ಮೊಹಮದ್ರ ಬಗ್ಗೆ ಅವಹೇಳನಕಾರಿ ಮಾತುಗಳನ್ನ ಆಡಿದ್ದ. ಅಲ್ಲದೆ ಈತ ಹಮಾಸ್ ನಾಯಕನೊಬ್ಬನ ಪುತ್ರ ಕೂಡ ಹೌದು. ಈ ವೀಡಿಯೋವನ್ನ ಹಿಂದೂ ಹುಡುಗನೊಬ್ಬ ಷೇರ್ ಮಾಡಿದ್ದ. ಈ ವಿಷಯ ಶ್ರೀನಗರ NITನಲ್ಲಿ ಕೋಲಾಹಲ ಎಬ್ಬಿಸಿತ್ತು. ಹಿಂದೂ ಹುಡುಗನ ಮೇಲೆ FIR ಕೂಡ ಫೈಲ್ ಆಗಿತ್ತು. ಈಗ ಈ ಬಗ್ಗೆ IS ಉಗ್ರರು ಕೆಂಡಕಾರಿದ್ದಾರೆ. ಮುಸ್ಲಿಂ ಮೆಜಾರಿಟಿ ಪ್ರದೇಶದಲ್ಲಿ ಈ ರೀತಿ ಆಗಿರೋದು ಆತಂಕಕಾರಿ. ಇದು ಯುದ್ಧಕ್ಕೆ ಆಹ್ವಾನ ಕೊಡೋ ಕೆಲಸ. ಕಾಶ್ಮೀರದಲ್ಲಿ ಬಹಳ ಬದಲಾವಣೆ ಬಂದಿದೆ. ಮೊದ್ಕೆಲ್ಲಾ ಮುಸ್ಲಿಮೇತತರು, ಅದ್ರಲ್ಲೂ ಹಿಂದೂಗಳು ಸೈಲೆಂಟಾಗಿರ್ತಿದ್ರು. ತಮ್ಮ ಅಭಿಪ್ರಾಯಗಳನ್ನ ಹೊರಗೆ ಹೇಳ್ತಿರ್ಲಿಲ್ಲ. ಈಗ ಆಗ್ತಿರೋ ತರ ಹಿಂದೂಗಳು ಡಾಮಿನೇಟ್ ಮಾಡಿದ್ರೆ, ಮುಸ್ಲಿಮರು ನೆಮ್ಮದಿಯಾಗಿ ಇರೋಕಾಗಲ್ಲ ಅಂತ IS ಹೇಳಿದೆ. ಅಲ್ಲದೆ ಹಿಂದೂ ಪ್ರಾಭಲ್ಯ ಇರೋ ಸಿಟಿಗಳಲ್ಲಿ ಮುಸ್ಲಿಮರ ವಿರುದ್ಧ ದೌರ್ಜನ್ಯ ಆಗ್ತಿದೆ. RSS ನಂತ ಸಂಘಟನೆಗಳು ಇವನ್ನ ಆಯೋಜನೆ ಮಾಡ್ತಿವೆ ಅಂದಿದೆ. ಕೊನೆಗೆ ನಾವು ಭಾರತಕ್ಕೆ ಬರ್ತೀವಿ. ಈ ಭಾರಿ ಕೈಯಲ್ಲಿ ಖಡ್ಗ ಹಿಡಿದು ಬರ್ತೀವಿ. ಬಾಬ್ರಿ ಮಸೀದಿಗಾಗಿ ಸೇಡಿ ತೀರಿಸಿಕೊಳ್ಳೋಕೆ ಬರ್ತೀವಿ. ಕಾಶ್ಮೀರ, ಮುಜಾಫರ್ನಗರ ಹಾಗೂ ಗುಜರಾತ್ನಲ್ಲಿ ನೊಂದ ಮುಸ್ಲಿಮರ ಪರವಾಗಿ ಸೇಡು ತೀರಿಸಿಕೊಳ್ತೇವೆ ಅಂತ ಬರೆದಿದ್ದಾರೆ. ಅಂದ್ಹಾಗೆ ಈ ಮ್ಯಾಗಜಿನ್ ಭಾರತ ಹಾಗೂ ಹಿಂದೂ ವಿರೋಧೀ ಕಮೆಂಟ್ ಹಾಕ್ತಿರೋದು ಇದೇ ಮೊದಲೇನಲ್ಲ. ಅಲ್ಲದೆ ಮುಸ್ಲಿಂರನ್ನ ಭಯೋತ್ಪಾದನೆಗೆ ಸೇರಿ ಅಂತ ಪ್ರೇರೇಪಣೆ ಮಾಡ್ತಾನೆ ಇರುತ್ತೆ.
-masthmagaa.com
Contact Us for Advertisement