ಐಎಸ್‌ ಸಂಘಟನೆಯಿಂದ ಹತ್ಯಾಕಾಂಡಕ್ಕೆ ಕರೆ: ಭಾರತ ಅಲರ್ಟ್!

masthmagaa.com:

ಐಎಸ್‌ ಉಗ್ರ ಸಂಘಟನೆ ಜಗತ್ತಿನಲ್ಲಿ ಭೀಕರ ದಾಳಿ ನಡೆಸೊಕೆ ಮುಂದಾಗಿದೆ ಅನ್ನೊ ಶಾಂಕಿಂಗ್‌ ವಿಚಾರ ಬಹಿರಂಗವಾಗಿದೆ. ಖುದ್ದು ಐಎಸ್‌ ವಕ್ತಾರನೊಬ್ಬ ರಂಜಾನ್‌ ಪ್ರಯುಕ್ತ ಸ್ಟೇಟ್‌ಮೆಂಟ್‌ ನೀಡಿ, ಜಗತ್ತಲ್ಲಿರೋ ಸೋ ಕಾಲ್ಡ್‌ ಲೋನ್‌ ವೋಲ್ಫ್‌ಗಳನ್ನ… ತೋಳಗಳು ಅಂತ ಕರೆಸಿಕೊಳ್ಳೋ ಉಗ್ರರಿಗೆ ದೊಡ್ಡ ಕರೆ ಕೊಟ್ಟಿದ್ದಾನೆ. ಐಎಸ್‌ ಸಂಘಟನೆ 2014ರ ಕ್ಯಾಲಿಫೆಟ್‌ ಘೋಷಣೆ ಮಾಡಿ ಈ ವರ್ಷ ಹತ್ತು ವರ್ಷ ತುಂಬಲಿದೆ. ಇದರ 10 ವರ್ಷಗಳ ನೆನಪಿಗಾಗಿ ಜಗತ್ತಿನಲ್ಲಿರೋ ನಾಸ್ತಿಕರ ಮೇಲೆ ದಾಳಿ ಮಾಡ್ಬೇಕು.. ಹತ್ಯಾಕಾಂಡ ಮಾಡ್ಬೇಕು. ಅದಕ್ಕಾಗಿ ಜಗತ್ತಿನಲ್ಲಿರೋ ಎಲ್ಲಾ ಮುಹಜರಿನ್‌ಗಳು.. ಅಂದ್ರೆ ಫೈಟರ್‌ಗಳು ಬಂದು ಸಂಘಟನೆಗೆ ಸೇರ್ಬೇಕು ಅಂತ ಈ ಪ್ರಾಣಿ ಕರೆಕೊಟ್ಟಿದೆ. ಅಂದ್ಹಾಗೆ 2014ರಲ್ಲಿ ಇರಾಕ್‌ ಹಾಗೂ ಸಿರಿಯಾಗಳಲ್ಲಿ ಐಎಸ್‌ ರಾಜ್ಯವನ್ನ ಸ್ಥಾಪಸಿರೋದಾಗಿ ಈ ಸಂಘಟನೆ ಘೋಷಣೆ ಮಾಡಿತ್ತು. ಇದನ್ನೇ ಕ್ಯಾಲಿಫೆಟ್‌ ಸ್ಥಾಪನೆ ಅಂತ ಈ ಸಂಘಟನೆ ಹೇಳುತ್ತೆ. ಇದೀಗ 2014ರ ಕ್ಯಾಲಿಫೆಟ್‌ ಸ್ಥಾಪನೆ ಆಫ್ರಿಕಾದ ಮೊಜಾಂಬಿಕ್‌ವರೆಗೆ ಸಂಘಟನೆ ಎಕ್ಸ್‌ಪ್ಯಾಂಡ್‌ ಆಗೋಕೆ ಟರ್ನಿಂಗ್‌ ಪಾಯಿಂಟ್‌ ಆಯ್ತು ಅಂತೇಳಿದ್ದಾನೆ. ಅಲ್ಲದೆ ಇತ್ತೀಚೆಗೆ ಮಾಸ್ಕೋದಲ್ಲಿ ನಡೆದ ದಾಳಿ ಬಗ್ಗೆನೂ ಈತ ಹಾಡಿ ಹೊಗಳಿದ್ದಾನೆ. ಪ್ರವಾದಿಗಳು ಹೇಳಿರೋ ಹಾಗೇ ಇಸ್ಲಾಂ ಧರ್ಮ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸುತ್ತೆ. ಅಲ್ಲಾರ ಸಹಾಯದಿಂದ ಇದು ಸಾಧ್ಯವಾಗುತ್ತೆ ಅಂದಿದ್ದಾನೆ. ಏಕದೇವತಾವಾದ ಅಥ್ವಾ ಮೋನೋಎಥಿಯಿಸ್ಮ್‌ ಸ್ಥಾಪಿಸೋದು ಇವರ ಗುರಿಯಂತೆ.. ಅಲ್ಲದೆ ಸದ್ಯ ಇವರ ದಾರಿಯಿಂದ ದೂರ ಸರಿದಿರೋ AQ ಸಂಘಟನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಇನ್ನು ಈತನ ಈ ಕರೆ ಬೆನ್ನಲ್ಲೇ ಭದ್ರತಾ ಏಜೆನ್ಸಿಗಳು ಅಲರ್ಟ್‌ನಲ್ಲಿವೆ. ಮುಖ್ಯವಾಗಿ ಸ್ಥಳೀಯ ಭದ್ರತಾ ಪಡೆಗಳಿಗೆ ಕ್ರೈಸ್ತ ಹಾಗೂ ಯಹೂದಿ ಧಾರ್ಮಿಕ್‌ ಕೇಂದ್ರಗಳ ಮೇಲೆ ಕಣ್ಣಿಡುವಂತೆ ಹೇಳಿದೆ. ಹೆಚ್ಚಿನ ಜನರು ಸೇರೋ ಸ್ಥಳಗಳಲ್ಲಿ ಹಾಗೂ ಸಾಂಸ್ಕೃತಿಕ ಕೇಂದ್ರಗಳಲ್ಲಿ ಯೂನಿಫಾರ್ಮ್‌ ಧರಿಸಿರೋ ಸಿಬ್ಬಂಧಿ ಗಸ್ತು ತಿರುಗಬೇಕು ಅಂತೇಳಿದೆ. ಜೊತೆಗೆ ಸೆಕ್ಯುರಿಟಿ ಕ್ಯಾಮೆರಾಗಳು ಹಾಗೂ ಅಲಾರ್ಮ್‌ಗಳನ್ನ ಪರಿಶೀಲನೆ ಮಾಡಿ, ಸೇಫ್ಟಿಯನ್ನ ಖಾತ್ರಿಪಡಿಸಿಕೊಳ್ಳಿ ಅಂತ ಸಲಹೆ ನೀಡಲಾಗಿದೆ.

-masthamagaa.com

Contact Us for Advertisement

Leave a Reply