masthmagaa.com:
ಕಾಂಗ್ರೆಸ್ ಸರ್ಕಾರ ರಚಿಸಿದ ಬೆನ್ನಲ್ಲೇ ಬಿಜೆಪಿ ವಿರುದ್ಧ ಟೀಕಾಪ್ರಹಾರ ಮಾಡಿದೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿದ್ದೇವೆ. ಆದ್ರೆ ನಮ್ಮ ಸರ್ಕಾರವನ್ನ ಎದುರಿಸೋಕೆ ಬಿಜೆಪಿಯಲ್ಲಿ ಸಮರ್ಥ ವಿರೋಧ ಪಕ್ಷದ ನಾಯಕ ಇಲ್ದೆ ಇರೋದು ದುರಂತ ಅಂತ ಕಾಂಗ್ರೆಸ್ ಟೀಕಿಸಿದೆ. ನಾವು ಗೆದ್ದೂ ಆಯ್ತು ಸಿಎಂ, ಡಿಸಿಎಂ ಆಯ್ಕೆಯೂ ಆಯ್ತು, ಸಚಿವ ಸಂಪುಟವೂ ರೆಡಿ ಆಯ್ತು, ಸರ್ಕಾರದ ರಚನೆಯೂ ಆಯ್ತು. ಆದ್ರೆ ಇದುವರೆಗೂ ನಮ್ಮ ಸರ್ಕಾರವನ್ನು ಎದುರಿಸಲು ಬಿಜೆಪಿಗೆ ಸಮರ್ಥ ವಿರೋಧ ಪಕ್ಷದ ನಾಯಕ ಸಿಗದೇ ಇರೋದು ದುರಂತ ಅಂತ ಕಾಂಗ್ರೆಸ್ ಛಾಟಿ ಬೀಸಿದೆ. ಅಲ್ದೆ ನೈತಿಕತೆ ಇಲ್ಲಾಂದ್ರೆ ಏನಾಯ್ತು, ಕನಿಷ್ಠ ವಿರೋಧ ಪಕ್ಷದ ನಾಯಕನನ್ನು ಮುಂದಿಟ್ಕೊಂಡಾದ್ರು ಬಿಜೆಪಿ ನಮ್ಮನ್ನು ವಿರೋಧಿಸಲಿ ಅಂತ ಕಾಂಗ್ರೆಸ್ ತಿವಿದಿದೆ.
-masthmagaa.com
Contact Us for Advertisement