ಈ ಚುನಾವಣೆ ಟಿಪ್ಪು ಹಾಗೂ ಸಾವರ್ಕರ್‌ ಮಧ್ಯೆ ನಡೆಯುತ್ತೆ: ನಳೀನ್‌ ಕುಮಾರ್‌ ಕಟೀಲು

masthmagaa.com:

ಟಿಪ್ಪು ಹಾಗೂ ಸಾವರ್ಕರ್‌ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ಆಗಾಗ ವಾಕ್ಸಮರ ಆಗ್ತಾ ಇರುತ್ತೆ. ಇದೀಗ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿ ರಾಜಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಮತ್ತೆ ಈ ವಿಷಯವನ್ನ ಪ್ರಸ್ತಾಪಿಸಿದ್ದಾರೆ. ಈ ಚುನಾವಣೆ ಟಿಪ್ಪು ಹಾಗೂ ಸಾವರ್ಕರ್‌ ಮಧ್ಯೆ ನಡೆಯುತ್ತೆ ಅಂತ ಹೇಳಿದ್ದಾರೆ. ಈ ರಾಜ್ಯಕ್ಕೆ ಟಿಪ್ಪು ಜಯಂತಿ ಆಚರಣೆ ಯಾಕೆ ಬೇಕು, ದೇಶ ವಿರೋಧಿ, ಹಿಂದೂಗಳ ವಿರೋಧಿಯಾಗಿದ್ದ ಟಿಪ್ಪುವನ್ನ ಆರಾಧಿಸುವ ಅಗತ್ಯವೇನಿದೆ? ಅದರ ಬದಲು ದೇಶ ಭಕ್ತ ಸಾವರ್ಕರ್ ಅವರ ಫೋಟೋಗಳನ್ನ ಇಟ್ಟು ಪೂಜಿಸೋಣ, ಸಾವರ್ಕರ್ ಅವರು ಹಾಕಿಕೊಟ್ಟ ವಿಚಾರಧಾರೆಗಳು, ತೋರಿಸಿಕೊಟ್ಟ ಮಾರ್ಗದಂತೆ ನಡೆಯೋಣ ಅಂತ ನಿನ್ನೆ ಭಟ್ಕಳದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply