masthmagaa.com:
ರಾಜ್ಯದಲ್ಲಿ IAS ರೋಹಿಣಿ ಸಿಂಧೂರಿ ಹಾಗೂ IPS ಡಿ ರೂಪಾ ನಡುವಿನ ಬೀದಿ ಕಾಳಗದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಈ ಇಬ್ಬರೂ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದ್ರೆ ಎಲ್ಲಿಗೆ ವರ್ಗಾವಣೆ ಮಾಡಲಾಗಿದೆ ಅಂತ ಉಲ್ಲೇಖ ಮಾಡಿಲ್ಲ. ಡಿ. ರೂಪಾ Karnataka Handicrafts Development Corpನ ಎಂಡಿಯಾಗಿದ್ದರು. ಅವರ ಜಾಗಕ್ಕೆ ಭಾರತಿ.ಡಿ ಅನ್ನೋ ಅಧಿಕಾರಿಯನ್ನ ನೇಮಿಸಲಾಗಿದೆ. ರೋಹಿಣಿ ಸಿಂಧೂರಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆಯಾಗಿದ್ದರು. ಅವರ ಜಾಗಕ್ಕೆ ಬಸವರಾಜೇಂದ್ರ ಎಚ್ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಇವರಿಬ್ರ ಜೊತೆಗೆ ರೂಪಾ ಅವರ ಪತಿ ಐಎಎಸ್ ಅಧಿಕಾರಿ ಮುನೀಷ್ ಮೌದ್ಗಿಲ್ರನ್ನು ಕೂಡ ರಾಜ್ಯಸರ್ಕಾರ ವರ್ಗಾವಣೆ ಮಾಡಿದೆ. ಇತ್ತ ಈ ಇಬ್ರ ಬೀದಿ ಜಗಳಕ್ಕೆ ರಾಜಕಾರಣಿಗಳು ತೀವ್ರ ಅಸಮಾಧಾನ ಹೊರ ಹಾಕ್ತಿದ್ದಾರೆ. ನಿನ್ನೆ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಧುಸ್ವಾಮಿ, ಅನ್ನದಾನಿ ಎಲ್ಲರೂ ಕೂಡ ಅಧಿಕಾರಿಗಳ ನಡೆಗೆ ವಿರೋಧ ವ್ಯಕ್ತಪಡಿಸಿದ್ರು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರೋ ನಟ, ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್, ಈ ಅಧಿಕಾರಿಗಳಿಗೆ ನೀವೇ ಸಲಹೆ ಕೊಡಬೇಕು ಅಂತ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಮನವಿ ಮಾಡಿದ್ದಾರೆ. ಟ್ವೀಟ್ನಲ್ಲಿ ಟ್ಯಾಗ್ ಮಾಡುವ ಮೂಲಕ ಈ ಬೀದಿ ಜಗಳ ನಿಲ್ಸಿ ಅಂತ ಜಗ್ಗೇಶ್ ಪಿಎಂರನ್ನೇ ಕರೆದಿದ್ದಾರೆ.
-masthmagaa.com
Contact Us for Advertisement