ಅಸ್ಸಾಂ: ಕಾಂಗ್ರೆಸ್‌ ರ‍್ಯಾಲಿ ವೇಳೆ ಜೈರಾಮ್‌ ರಮೇಶ್‌ ಕಾರಿಗೆ ಮುತ್ತಿಗೆ

masthmagaa.com:

ಅಸ್ಸಾಂನಲ್ಲಿ ಸಾಗ್ತಿರೋ ಕಾಂಗ್ರೆಸ್‌ನ ಭಾರತ್‌ ಜೋಡೋ ನ್ಯಾಯ ಯಾತ್ರೆಗೆ ಬಹಳಷ್ಟು ಅಡಚಣೆ ಉಂಟಾಗಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಇದ್ರ ಬೆನ್ನಲ್ಲೆ ಕಾಂಗ್ರೆಸ್‌ ಲೀಡರ್‌ ಜೈರಾಮ್‌ ರಮೇಶ್‌ ಕಾರ್‌ಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿರೋದಾಗಿ ಕಾಂಗ್ರೆಸ್‌ ಆರೋಪಿಸಿದೆ. ಈ ಬಗ್ಗೆ ಜೈರಾಮ್‌ ರಮೇಶ್‌ ಪ್ರತಿಕ್ರಿಯಿಸಿದ್ದು, ʻಅಸ್ಸಾಂನ ಸುನಿತ್‌ಪುರ್‌ದಲ್ಲಿ ಬಿಜೆಪಿ ಕಾರ್ಯಕರ್ತರು ನನ್ನ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲದೇ ನ್ಯಾಯ ಯಾತ್ರೆಯ ಪೋಸ್ಟರ್‌ಗಳನ್ನ ಹರಿದು ವಿರೋಧಿ ಘೋಷಣೆಗಳನ್ನ ಕೂಗಿದ್ದಾರೆ. ಇದೆಲ್ಲ ಅಸ್ಸಾಂ ಸಿಎಂ ಹಿಮಂತ್‌ ಬಿಸ್ವಾ ಸರ್ಮಾ ಅವ್ರ ಕುತಂತ್ರವಾಗಿದೆ. ನಾವು ಇದಕ್ಕೆ ಹೆದರೋದಿಲ್ಲ ಸೈನಿಕರಂತೆ ಮುನ್ನುಗ್ಗುತ್ತೇವೆʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply