ಭಾರತದ ಚುನಾವಣೆ ಬಗ್ಗೆ ಮಾತಾಡಿದ್ದ ವಿಶ್ವಸಂಸ್ಥೆಗೆ ಜೈಶಂಕರ್‌ ಪಾಠ!

masthmagaa.com:

ಭಾರತದ ಚುನಾವಣಾ ಪ್ರಕ್ರಿಯೆ ಟೀಕೆ ಮಾಡಿದ್ದ ವಿಶ್ವಸಂಸ್ಥೆ ವಿರುದ್ಧ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಗುಡುಗಿದ್ದಾರೆ. ನಮ್ಮ ಚುನಾವಣೆ ಮುಕ್ತವಾಗಿರ್ಬೇಕು ಅಂತ ವಿಶ್ವಸಂಸ್ಥೆ ಹೇಳೋ ಅವಶ್ಯಕತೆ ಇಲ್ಲ ಅಂದಿದ್ದಾರೆ. ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್‌ ಭಾರತದಲ್ಲಿ ಜನರ ರಾಜಕೀಯ ಹಾಗೂ ನಾಗರಿಕ ಹಕ್ಕುಗಳನ್ನ ಕಾಪಾಡಲಾಗುತ್ತೆ, ಅಲ್ಲಿನ ಜನರು ಮುಕ್ತವಾಗಿ ಹಾಗೂ ಒಳ್ಳೇ ರೀತಿಯಲ್ಲಿ ಚುನಾವಣೆ ಎದುರಿಸ್ತಾರೆ ಅಂತ ನಾವು ಭಾವಿಸ್ತೇವೆ ಅಂತ ಕಮೆಂಟ್‌ ಮಾಡಿದ್ರು. ಇದಕ್ಕೆ ಟಾಂಗ್‌ ಕೊಟ್ಟಿರೋ ಜೈಶಂಕರ್‌, ನಮ್ಮ ಚುನಾವಣೆಗಳು, ಫ್ರೀ ಅಂಡ್‌ ಫೇರ್‌ ಆಗಿರ್ಬೇಕು ಅಂತ ವಿಶ್ವಸಂಸ್ಥೆ ಹೇಳೋದು ಬೇಕಿಲ್ಲ. ಈ ರೀತಿ ಆಗುವಂತೆ ಭಾರತದ ಜನರೇ ನೋಡಿಕೊಳ್ತಾರೆ. ಅದ್ರ ಬಗ್ಗೆ ವಿಶ್ವಸಂಸ್ಥೆ ತಲೆಕೆಡಿಸಿಕೊಳ್ಳೋ ಅಗತ್ಯ ಇಲ್ಲ ಅಂದಿದ್ದಾರೆ.

-masthmagaa.com

Contact Us for Advertisement

Leave a Reply