ಶ್ರೀನಗರದಲ್ಲಿ ಪ್ರಾರ್ಥನೆ ವೇಳೆ ಆಜಾದಿ ಘೋಷಣೆ.. 13 ಜನ ಆರೆಸ್ಟ್‌

masthmagaa.com:

ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಆಜಾದಿ ಪರ ಘೋಷಣೆ ಕೂಗಿದ 13 ಜನರನ್ನ ಜಮ್ಮು ಕಾಶ್ಮೀರ ಪೊಲೀಸರು ಆರೆಸ್ಟ್‌ ಮಾಡಿದ್ದಾರೆ. ಇವರ ಮೇಲೆ ದೇಶದ್ರೋಹ ಮತ್ತು ಕ್ರಿಮಿನಲ್‌ ಪ್ರಕರಣವನ್ನ ದಾಖಲಿಸಿದ್ದಾರೆ. ಇನ್ನು ಇದರಲ್ಲಿ ಪಾಕ್​​ ಉಗ್ರ ಸಂಘಟನೆಗಳ ಕೈವಾಡ ಇದೆ ಅಂತಲೂ ಮಾಹಿತಿ ಬಂದಿದ್ದು, ಪ್ರಾರ್ಥನೆಯನ್ನ ಅಡ್ಡಿ ಪಡಿಸಲು ಮತ್ತು ಗಲಾಟೆಯನ್ನ ಉಂಟು ಮಾಡಲು ಹೀಗೆ ಮಾಡಿದ್ದಾರೆ ಅಂತ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ. ಶ್ರೀನಗರದ ಓಲ್ಡ್‌ ಸಿಟಿಯಲ್ಲಿರುವ ಈ ಮಸೀದಿಯನ್ನ ಎರಡು ವರ್ಷಗಳ ನಂತ್ರ ಕಳೆದ ತಿಂಗಳಷ್ಟೇ ಪ್ರಾರ್ಥನೆಸಲುವಾಗಿ ತೆರೆಯಲಾಗಿತ್ತು.

-masthmagaa.com

Contact Us for Advertisement

Leave a Reply