masthmagaa.com:
ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಆಜಾದಿ ಪರ ಘೋಷಣೆ ಕೂಗಿದ 13 ಜನರನ್ನ ಜಮ್ಮು ಕಾಶ್ಮೀರ ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಇವರ ಮೇಲೆ ದೇಶದ್ರೋಹ ಮತ್ತು ಕ್ರಿಮಿನಲ್ ಪ್ರಕರಣವನ್ನ ದಾಖಲಿಸಿದ್ದಾರೆ. ಇನ್ನು ಇದರಲ್ಲಿ ಪಾಕ್ ಉಗ್ರ ಸಂಘಟನೆಗಳ ಕೈವಾಡ ಇದೆ ಅಂತಲೂ ಮಾಹಿತಿ ಬಂದಿದ್ದು, ಪ್ರಾರ್ಥನೆಯನ್ನ ಅಡ್ಡಿ ಪಡಿಸಲು ಮತ್ತು ಗಲಾಟೆಯನ್ನ ಉಂಟು ಮಾಡಲು ಹೀಗೆ ಮಾಡಿದ್ದಾರೆ ಅಂತ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಶ್ರೀನಗರದ ಓಲ್ಡ್ ಸಿಟಿಯಲ್ಲಿರುವ ಈ ಮಸೀದಿಯನ್ನ ಎರಡು ವರ್ಷಗಳ ನಂತ್ರ ಕಳೆದ ತಿಂಗಳಷ್ಟೇ ಪ್ರಾರ್ಥನೆಸಲುವಾಗಿ ತೆರೆಯಲಾಗಿತ್ತು.
-masthmagaa.com
Contact Us for Advertisement