ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಕದ ತಟ್ಟಿದ KCR ಪುತ್ರಿ ಕೆ.ಕವಿತಾ!

masthmagaa.com:

ಇತ್ತೀಚಿಗೆ ದಿಲ್ಲಿ ಮದ್ಯ ಹಗರಣ ಪ್ರಕರಣದಲ್ಲಿ ಅರೆಸ್ಟ್‌ ಆಗಿರೋ ತೆಲಂಗಾಣದ ಮಾಜಿ ಸಿಎಂ KCR ಪುತ್ರಿ ಕೆ.ಕವಿತಾ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. ED ಅಧಿಕಾರಗಳು ಅರೆಸ್ಟ್‌ ಮಾಡಿರೋ ಕ್ರಮವನ್ನ ಪ್ರಶ್ನಿಸಿ ಕವಿತಾ ಇದೀಗ ಸುಪ್ರೀಂ ಮೆಟ್ಟಿಲೇರಿದ್ದಾರೆ. ಅತ್ತ ದೆಹಲಿ ಜಲ ಮಂಡಳಿಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ED ಅಧಿಕಾರಿಗಳು ನೀಡಲಾದ ಸಮನ್ಸ್‌ನ್ನ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಸ್ಕಿಪ್‌ ಮಾಡಿದ್ದಾರೆ. ಇತ್ತೀಚಿಗೆ ದಿಲ್ಲಿ ಮದ್ಯ ಹಗರಣ ಕೇಸ್‌ನಲ್ಲಿ ಕೇಜ್ರಿವಾಲ್‌ಗೆ 9ನೇ ಸಮನ್ಸ್‌ ನೀಡಲಾಗಿತ್ತು. ಅಲ್ದೇ ಈ ವಿಚಾರವಾಗಿ ಮಾರ್ಚ್‌ 21ರಂದು ವಿಚಾರಣೆಗೆ ಹಾಜರಾಗುವಂತೆ ED ಹೇಳಿತ್ತು. ಅದ್ರ ಬೆನ್ನಲ್ಲೆ ಬಂದ ಈ ಸಮನ್ಸ್‌ನ್ನ ಕೇಜ್ರಿವಾಲ್‌ ಸ್ಕಿಪ್‌ ಮಾಡಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ.

-masthmagaa.com

Contact Us for Advertisement

Leave a Reply