ಚಾರ್ಟಡ್‌ ಫ್ಲೈಟ್‌ಲ್ಲಿ ಕಬ್ಜ ಟೀಮ್‌ ಟೆಂಪಲ್‌ ರನ್‌..

masthmagaa.com:

ಖ್ಯಾತ ನಿರ್ದೇಶಕ ಆರ್‌. ಚಂದ್ರು ಅವರ ಪ್ಯಾನ್‌ ಇಂಡಿಯಾ ಚಿತ್ರ ʻಕಬ್ಜʼ ನಾಳೆ ವಿಶ್ವದಾದ್ಯಂತ ರಿಲೀಸ್‌ ಆಗಲಿದೆ. ಈ ಸಂದರ್ಭದಲ್ಲಿʻಕಬ್ಜʼ ಚಿತ್ರತಂಡ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮುಂದಾಗಿದೆ. ಚಾರ್ಟಡ್‌ ಫ್ಲೈಟಲ್ಲಿ ನಟ ಉಪೇಂದ್ರ, ನಿರ್ದೇಶಕ ಆರ್‌. ಚಂದ್ರು, ಕೆ.ಪಿ ಶ್ರೀಕಾಂತ್‌, ಸೀಕಲ್‌ ರಾಮಚಂದ್ರಗೌಡ ಸೇರಿದಂತೆ ಹಲವರು ತಿರುಪತಿಗೆ ಪ್ರಯಾಣ ಬೆಳೆಸಿದ್ದಾರೆ. ತಿಮ್ಮಪ್ಪನ ಎದುರು ಕಬ್ಜ ಹಾರ್ಡ್‌ ಡಿಸ್ಕ್‌ ಇಟ್ಟು ಪೂಜೆ ಮಾಡಿ ಚಿತ್ರಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. ಅಪ್ಪು ಅವರ ಹುಟ್ಟುಹಬ್ಬದ ದಿನ ಚಿತ್ರವನ್ನು ರಿಲೀಸ್‌ ಮಾಡಲಾಗುತ್ತಿದ್ದು, ಚಿತ್ರತಂಡ ಸಿನಿಮಾವನ್ನ ಪುನೀತ್‌ ಅವರಿಗೆ ಅರ್ಪಣೆ ಮಾಡುತ್ತಿದೆ.

ಚಿತ್ರದ ಪ್ರಿ ರಿಲೀಸ್‌ ಇವೆಂಟ್‌ನ್ನು ಮೊನ್ನೆಯಷ್ಟೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮಾಡಲಾಯಿತು. ಈ ಸಮಯದಲ್ಲಿ ಉಪೇಂದ್ರ ಅವರು ʼಕಬ್ಜ-2ʼ ಸಿನಿಮಾದಲ್ಲಿ ನನಗೆ ಅತಿಥಿ ಪಾತ್ರ ಕೊಡಿ, ಸುದೀಪ್‌ ಅವರನ್ನ ಹೀರೋ ಆಗಿ ಮಾಡಿ ಎಂದು ನಿರ್ದೇಶಕ ಆರ್‌. ಚಂದ್ರು ಅವರಲ್ಲಿ ಕೇಳಿದ್ದರು. ಈ ರೀತಿ ಉಪೇಂದ್ರ ಅವರು ಕಬ್ಜ 2 ಸಿನಿಮಾದ ಸುಳಿವು ನೀಡಿದ್ದರು. ಸಿನಿಮಾದ ಪ್ರೀ-ರಿಲೀಸ್‌ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್‌ ಅವರು ಗೈರಾಗಿದ್ದರು. ಇದರ ಬಗ್ಗೆ ಮಾತಾನಾಡಿದ ಅರ್.‌ ಚಂದ್ರು ಅವರು ʼಕಬ್ಜ ಸಿನಿಮಾ ಆಗೋಕೆ ಈ ಮೂವರು (ಉಪೇಂದ್ರ, ಸುದೀಪ್, ಶಿವರಾಜ್‌ಕುಮಾರ್‌) ಕಾರಣ. ಇಬ್ಬರು ಲೆಜೆಂಡ್‌ಗಳು ಇಲ್ಲಿದ್ದಾರೆ. ಮತ್ತೋರ್ವ ಲೆಜೆಂಡ್‌ ಶಿವಣ್ಣ ಬಂದಿಲ್ಲ. ಅವರು ನನಗೆ, ಮತ್ತು ಕರ್ನಾಟಕಕ್ಕೆ ಅಣ್ಣ. ಅವರು ಇಂದು ಬರಬೇಕಿತ್ತು. ಆದರೆ, ಕೇರಳದಲ್ಲಿ ಶೂಟಿಂಗ್‌ ಇರೋದ್ರಿಂದ ಅವರು ಬರೋಕೆ ಆಗುತ್ತಿಲ್ಲʼ ಎಂದು ಅವರು ಬರದೆ ಇರುವುದರ ಬಗ್ಗೆ ಸ್ಪಷ್ಟನೆ ನೀಡಿದ್ದರು.

ನಿರ್ದೇಶಕ ಆರ್‌ ಚಂದ್ರು ಅವರನ್ನು ಅಭಿನಂದಿಸಿದ ಸುದೀಪ್‌, ʼಇಂಥದ್ದೊಂದು ಚಿತ್ರದಲ್ಲಿ ಭಾಗಿಯಾಗಿದ್ದೇನೆ ಎನ್ನುವುದು ಖುಷಿ ನೀಡಿದೆ. ನಿರ್ದೇಶಕರು ಸಿನಿಮಾವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಪ್ರೇಕ್ಷಕರು ಕೂಡ ಅಷ್ಟೇ ಈ ಸಿನಿಮಾವನ್ನ ಒಪ್ಪಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ. ಒಳ್ಳೊಳ್ಳೆ ಸಿನಿಮಾಗಳು ಹಾಗೂ ಹೃದಯಕ್ಕೆ ಹತ್ತಿರ ಇದ್ದವರು ಸಿನಿಮಾ ಮಾಡಿದಾಗ, ಅವರಿಗೆ ಸಪೋರ್ಟ ಮಾಡುವುದು ನನ್ನ ಕರ್ತವ್ಯ. ನಾನು ಮಾಡಿದ್ದೇನೆʼ ಎಂದು ಹೇಳಿದ್ದರು.
ಮೊನ್ನೆಯಿಂದ ಸಿನಿಮಾದ ಅನ್‌ಲೈನ್‌ ಟಿಕೆಟ್‌ ಬುಕಿಂಗ್‌ ಶುರುವಾಗಿದ್ದು, ತುಂಬಾ ಸ್ಪೀಡ್‌ಲ್ಲಿ ಟಿಕೆಟ್‌ಗಳೂ ಮಾರಾಟ ಆಗುತ್ತಿವೆ.

-masthmagaa.com

Contact Us for Advertisement

Leave a Reply