ಅಂಬೇಡ್ಕರ್‌ ಪೂಜೆಗೆ ನಿರಾಕರಿಸಿದ್ದ ಯುವಕನಿಗೆ ಇದೆಂಥಾ ಶಿಕ್ಷೆ?

masthmagaa.com:

ಹಾಸ್ಟೆಲ್‌ವೊಂದರಲ್ಲಿ ಅಂಬೇಡ್ಕರ್‌ ಪೂಜೆಗೆ ಭಾಗವಹಿಸಲು ನಿರಾಕರಿಸಿದ್ದ ಯುವಕನನ್ನ ಅರೆ ಬೆತ್ತಲೆ ಮೆರವಣಿಗೆ ಮಾಡಿರೋ ಅಮಾನವೀಯ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಗುರುವಾರ ವಿದ್ಯಾರ್ಥಿಗಳ ಗುಂಪೊಂದು ಈ ಯುವಕನಿಗೆ ಅಂಬೇಡ್ಕರ್‌ ಭಾವಚಿತ್ರವನ್ನ ತಲೆ ಮೇಲೆ ಹೊರಿಸಿ ನಗರದ ಬೀದಿಗಳಲ್ಲಿ ಅರೆ ಬೆತ್ತಲೆ ಮೆರವಣಿಗೆ ಮಾಡ್ಸಿದೆ. ಈ ಕುರಿತಾದ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವಿದ್ಯಾರ್ಥಿಗಳ ಮೇಲೆ ಪೋಲಿಸರು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲಿಸಿದ್ದಾರೆ.

-masthmagaa.com

Contact Us for Advertisement

Leave a Reply