masthmagaa.com:
ಕನ್ನಡತಿ ಸೀರಿಯಲ್ ಮೂಲಕ ಕನ್ನಡಿಗರಿಗೆ ತುಂಬಾನೇ ಹತ್ತಿರವಾಗಿದ್ದ ರಂಜನಿ ರಾಘವನ್ ಈಗ ಸಿನಿಮಾ ಕ್ಷೇತ್ರದಲ್ಲೂ ಮುಂದುವರೆಯುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ರಾಜಹಂಸ , ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಹೀಗೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ರು. ನಂತರ ಕನ್ನಡತಿ ಸೀರಿಯಲ್ನಲ್ಲಿ ಮೇನ್ ಲೀಡ್ ಆಕ್ಟರ್ ಆಗಿ ಕಾಣಿಸಿಕೊಂಡಿದ್ರು. ಸೀರಿಯಲ್ ಮುಗಿದು ಹಲವು ತಿಂಗಳುಗಳ ಕಾಲ ಯಾವುದೇ ಸಿನಿಮಾ ಆಗಲೀ ಅಥವಾ ಸೀರಿಯಲ್ಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದ್ರೆ ಈಗ ರಂಜನಿ ಅವರ ಮುಂದಿನ ಸಿನಿಮಾದ ಘೋಷಣೆ ಆಗಿದೆ.
ಸ್ವತಃ ಸಿನಿಮಾ ತಂಡವೇ ಈ ಮಾಹಿತಿಯನ್ನ ಕೊಟ್ಟಿದೆ. ಆ ಲೆಕ್ಕದಂತೆ ಈ ಚಿತ್ರಕ್ಕೆ ಡೆಡ್ಲಿ ಸೋಮ ಚಿತ್ರ ಖ್ಯಾತಿಯ ನಟ ಆದಿತ್ಯ ಈ ಚಿತ್ರಕ್ಕೆ ನಾಯಕರಾಗಿಯೇ ಆಯ್ಕೆ ಆಗಿದ್ದಾರೆ. ಈ ನಾಯಕನಿಗೆ ನಟಿ ರಂಜನಿ ರಾಘವನ್ ಜೋಡಿ ಆಗಿದ್ದಾರೆ. ಇನ್ನು ಚಿತ್ರವನ್ನ ನವ ನಿರ್ದೇಶಕ ಕಿಶೋರ್ ಮೇಗಳಮನೆ ನಿರ್ದೇಶನ ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆ, ನಿರ್ದೇಶನ, ಸಂಭಾಷಣೆಯನ್ನ ಹೀಗೆ ಎಲ್ಲವನ್ನೂ ಕಿಶೋರ್ ಮಾಡುತ್ತಿದ್ದು, ಸಸ್ಪೆನ್ಸ್ ಕತೆಯನ್ನ ಈ ಚಿತ್ರ ಹೊಂದಿದೆ.
-masthmagaa.com
Contact Us for Advertisement