masthmagaa.com:
ಸದಾ ಭಾರತದ ನಡೆಗಳನ್ನ ವಿರೋಧಿಸೋ ಚೀನಾ, ಅದ್ಯಾಕೋ ಶ್ರೀರಾಮನ ವಿಚಾರದಲ್ಲಿ ಮಾತ್ರ ಭಾರತದ ಜೊತೆ ಸೇರ್ಕೊಂಡಿದೆ. ಹೌದು, ಜನವರಿ 22 ರಂದು ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಅದ್ದೂರಿಯಾಗಿ ಪ್ರಾಣ ಪ್ರತಿಷ್ಠಾಪನೆ ನೆರವೇರಿತ್ತು. ಅದೇ ವೇಳೆ ಚೀನಾದ ಬಾರ್ಡರ್ನಲ್ಲಿ ʻಜೈ ಶ್ರೀರಾಮ್ʼ ಅಂತ ಕೂಗು ಕೇಳಿಬಂದಿದೆ. ಈ ಮಾಹಿತಿಯನ್ನ ಕಾರ್ಗಿಲ್ ವಾರ್ ವೆಟರನ್ ಅಂದ್ರೆ ಹಿರಿಯ ಅಧಿಕಾರಿ ಅಂತ ಕರೆಸಿಕೊಳ್ಳೋ ಮೇಜರ್ ರಾಕೇಶ್ ಅವ್ರು ವಿಡಿಯೋ ಒಂದನ್ನ ಪೋಸ್ಟ್ ಮಾಡಿ ಹಂಚಿಕೊಂಡಿದ್ದಾರೆ. ಇದ್ರ ಪ್ರಕಾರ, LAC ಬಾರ್ಡರ್ನಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಸೈನಿಕರು, ಭಾರತೀಯ ಸೈನಿಕರೊಂದಿಗೆ ಸೇರ್ಕೊಂಡು ʻಜೈ ಶ್ರೀರಾಮ್ʼ ಅಂತ ಕೂಗಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.
-masthmagaa.com
Contact Us for Advertisement