masthmagaa.com:
ಹರಿಯಾಣದಲ್ಲಿ ಆಗಸ್ಟ್ 28ರಂದು ಪ್ರತಿಭಟನಾಕಾರರ ಮೇಲೆ ನಡೆದ ಲಾಠಿಚಾರ್ಜ್ ವಿರೋಧಿಸಿ, ಕರ್ನಲ್ನಲ್ಲಿ ಇವತ್ತು ಕಿಸಾನ್ ಮಹಾಪಂಚಾಯತ್ ನಡೆಸಲಾಗಿದೆ. ಅದ್ರಲ್ಲಿ ಸಾವಿರಾರು ರೈತರು ಭಾಗಿಯಾಗಿದ್ರು. ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಏರ್ಪಡಿಲಾಗಿತ್ತು. ಆದ್ರೆ ಇವತ್ತು ಮಹಾಪಂಚಾಯತ್ಗೆ ಮಾತ್ರವೇ ಪೊಲೀಸರು ಅನುಮತಿ ನೀಡಿದ್ರು. ಆದ್ರೆ ರೈತರು ನಂತರದಲ್ಲಿ ಮೆರವಣಿಗೆಗೆ ಮುಂದಾದ್ರು. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ. ಈ ವೇಳೆ ಕಿಸಾನ್ ಪಂಚಾಯತ್ ನೇತೃತ್ವ ವಹಿಸಿದ್ದ ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ಮತ್ತು ಭಾರತ್ ಕಿಸಾನ್ ಯೂನಿಯನ್ನ ನಾಯಕ ರಾಕೇಶ್ ಟಿಕೈತ್ ಮತ್ತು ಇತರೆ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
-masthmagaa.com
Contact Us for Advertisement