masthmagaa.com:
ಆಗಸ್ಟ್ 28ರಂದು ಹರಿಯಾಣದಲ್ಲಿ ರೈತರ ಮೇಲೆ ನಡೆದ ಲಾಠಿಚಾರ್ಜ್ ಖಂಡಿಸಿ, ರೈತರು ಕರ್ನಲ್ನ ಮಿನಿ ಸೆಕ್ರೆಟರಿಯೇಟ್ ಬಳಿ ಒಟ್ಟಾಗಿದ್ದಾರೆ. ಹೀಗಾಗಿ ಕರ್ನಲ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಎಸ್ಎಂಎಸ್ ಸೇವೆಯನ್ನು ತಾತ್ಕಾಲಿಕವಾಗಿ ಸಸ್ಪೆಂಡ್ ಮಾಡಲಾಗಿದೆ. ಆದ್ರೆ ಇವತ್ತು ಪ್ರತಿಕ್ರಿಯಿಸಿರೋ ಪ್ರತಿಭಟನಾಕಾರರ ನೇತೃತ್ವ ವಹಿಸಿರೋ ಭಾರತ್ ಕಿಸಾನ್ ಯೂನಿಯನ್ನ ನಾಯಕ ರಾಕೇಶ್ ಟಿಕೈತ್, ಸರ್ಕಾರದ ಜೊತೆಗೆ ಇವತ್ತು ನಡೆಸಿದ ಮಾತುಕತೆ ವಿಫಲವಾಗಿದೆ. ಸಿಂಘು ಮತ್ತು ಟಿಕ್ರಿ ಗಡಿಯಂತೆ ಇಲ್ಲೂ ಕೂಡ ನಾವು ಶಾಶ್ವತವಾದ ಪ್ರತಿಭಟನೆ ಮಾಡ್ಬೇಕಾಗುತ್ತೆ ಅಂತ ಹೇಳಿದ್ದಾರೆ. ಆಗಸ್ಟ್ 28ರಂದು ನಡೆದಿದ್ದ ಲಾಠಿಚಾರ್ಜ್ಗೂ ಮುನ್ನ ರಸ್ತೆ ಬ್ಲಾಕ್ ಮಾಡಿದ್ರೆ, ಮುಂದೆ ಬಂದ್ರೆ ಅಂಥವರ ತಲೆ ಒಡೀರಿ ಅಂತ ಹೇಳಿಕೆ ಕೊಟ್ಟಿದ್ದ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾರನ್ನು ಸಸ್ಪೆಂಡ್ ಮಾಡ್ಬೇಕು, ಲಾಠಿಚಾರ್ಜ್ ಸಂತ್ರಸ್ತ ರೈತರಿಗೆ ನ್ಯಾಯ ನೀಡಬೇಕು ಅನ್ನೋದು ರೈತರ ಒತ್ತಾಯವಾಗಿದೆ. ಈ ಘಟನೆಯಲ್ಲಿ ಓರ್ವ ರೈತ ಪ್ರಾಣ ಕಳ್ಕೊಂಡಿದ್ರು. ಆದ್ರೆ ಪೊಲೀಸರು ಆತ ಹೃದಯಾಘಾತಕ್ಕೆ ಒಳಗಾಗಿದ್ದು ಅಂತ ಹೇಳಿದ್ರು.
-masthmagaa.com
Contact Us for Advertisement