masthmagaa.com:
‘ಏಪ್ರಿಲ್ ಬಳಿಕ ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನ ಕೆಳಗಿಳಿಸುತ್ತಾರೆ. ಈ ಬಗ್ಗೆ ನನಗೆ ಆರ್ಎಸ್ಎಸ್ ಮೂಲಗಳಿಂದ ಮಾಹಿತಿ ಬಂದಿದೆ’ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರೋ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ‘ಸಿದ್ದರಾಮಯ್ಯ ಆರ್ಎಸ್ಎಸ್ನಲ್ಲಿ ಇದ್ದವರಾ..? ಅವರ ಹೇಳಿಕೆಯ ಮೂಲ ಯಾವ್ದು..? ಆರ್ಎಸ್ಎಸ್ ಬಿಡಿ.. ಮೊದಲು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜೊತೆ ಫೋನ್ನಲ್ಲಿ ಸರಿಯಾಗಿ ಕಾಂಟ್ಯಾಕ್ಟ್ ಇಟ್ಕೊಳ್ಳಿ. ಅವರ ನಾಯಕರ ಜೊತೆಯೇ ಸರಿಯಾಗಿ ಸಂಪರ್ಕ ಇಟ್ಟುಕೊಳ್ಳದವರ ಜೊತೆ ಆರ್ಎಸ್ಎಸ್ನವರು ಮಾತನಾಡುತ್ತಾರೆಯೇ’ ಅಂತ ಸಿದ್ದರಾಮಯ್ಯಗೆ ಗುದ್ದು ಕೊಟ್ಟಿದ್ದಾರೆ.
-masthmagaa.com
Contact Us for Advertisement