ಏಪ್ರಿಲ್​ ಬಳಿಕ ಸಿಎಂ ಬದಲಾವಣೆ: ಸಿದ್ದು ಹೇಳಿಕೆಗೆ ಕಟೀಲ್ ಗುದ್ದು

masthmagaa.com:

‘ಏಪ್ರಿಲ್​ ಬಳಿಕ ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನ ಕೆಳಗಿಳಿಸುತ್ತಾರೆ. ಈ ಬಗ್ಗೆ ನನಗೆ ಆರ್​ಎಸ್​ಎಸ್​ ಮೂಲಗಳಿಂದ ಮಾಹಿತಿ ಬಂದಿದೆ’ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರೋ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​, ‘ಸಿದ್ದರಾಮಯ್ಯ ಆರ್​ಎಸ್​​ಎಸ್​ನಲ್ಲಿ ಇದ್ದವರಾ..? ಅವರ ಹೇಳಿಕೆಯ ಮೂಲ ಯಾವ್ದು..? ಆರ್​ಎಸ್​ಎಸ್​​ ಬಿಡಿ.. ಮೊದಲು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜೊತೆ ಫೋನ್​ನಲ್ಲಿ ಸರಿಯಾಗಿ ಕಾಂಟ್ಯಾಕ್ಟ್ ಇಟ್ಕೊಳ್ಳಿ. ಅವರ ನಾಯಕರ ಜೊತೆಯೇ ಸರಿಯಾಗಿ ಸಂಪರ್ಕ ಇಟ್ಟುಕೊಳ್ಳದವರ ಜೊತೆ ಆರ್​ಎಸ್​ಎಸ್​ನವರು ಮಾತನಾಡುತ್ತಾರೆಯೇ’ ಅಂತ ಸಿದ್ದರಾಮಯ್ಯಗೆ ಗುದ್ದು ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply