masthmagaa.com:
ಅತ್ತ ಸಿಎಂ ಪುತ್ರ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯಗೆ ಗ್ರಾಮಸ್ಥರು ಘೇರಾವ್ ಹಾಕಿರೋ ಘಟನೆ ಅವ್ರ ಸ್ವಕ್ಷೇತ್ರ ವರುಣಾದಲ್ಲಿ ನಡೆದಿದೆ. ಕ್ಷೇತ್ರದ ಮುದ್ದುಬೀರನಹುಂಡಿ ಗ್ರಾಮದ ಕುಂದು ಕೊರತೆ ಕೇಳೋಕೆ ಹೋದಾಗ ಯತೀಂದ್ರ ಅವ್ರಿಗೆ ಘೇರಾವ್ ಹಾಕಲಾಗಿದೆ. ಗ್ರಾಮದ ಒಳಗೆ ಬರಬೇಡಿ ಅಂತ ಗ್ರಾಮಸ್ಥರು ತಡೆದ ಕಾರಣ ಯತೀಂದ್ರ ಬಂದ ದಾರಿಯಲ್ಲೇ ವಾಪಸ್ಸಾಗಿದ್ದಾರೆ ಅಂತ ಗೊತ್ತಾಗಿದೆ. ಇನ್ನು ಇತ್ತೀಚಿಷ್ಟೆ ಕರ್ನಾಟಕ ಹೈ ಕೋರ್ಟ್ನ ಏಕ ಸದಸ್ಯ ಪೀಠ, 5,8,9 ಹಾಗೂ 11ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಎಕ್ಸಾಂ ಮಾಡೋದು ಬೇಡ ಅಂತ ಆದೇಶ ನೀಡಿತ್ತು. ಇದಕ್ಕೆ ಸಂಬಂಧಿಸಿದ ರಾಜ್ಯ ಸರ್ಕಾರದ ಆದೇಶವನ್ನ ಹೈಕೋರ್ಟ್ ರದ್ದುಗೊಳಿಸಿತ್ತು. ಆದ್ರೆ ಈಗ ಹೈಕೋರ್ಟ್ನ ವಿಭಾಗೀಯ ಪೀಠ, ಏಕ ಸದಸ್ಯ ಪೀಠದ ಆದೇಶವನ್ನ ರದ್ದು ಪಡಿಸಿ, 5,8,9 ಮತ್ತು 11ನೇ ಕ್ಲಾಸ್ಗಳಿಗೆ ಬೋರ್ಡ್ ಎಕ್ಸಾಮ್ ನಡೆಸೋಕೆ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ರಾಜ್ಯ ಸರ್ಕಾರ ನಿರ್ಧಾರಕ್ಕೆ ಜಯ ಸಿಕ್ಕಂತಾಗಿದೆ.
-masthmagaa.com
Contact Us for Advertisement