ಕರ್ನಾಟಕ ಗಡಿಯಲ್ಲಿ 865 ಪ್ರದೇಶಗಳಿಗೆ ಆರೋಗ್ಯ ವಿಮೆ ಆದೇಶ ಹೊರಡಿಸಿದ ಮಹಾರಾಷ್ಟ್ರ!

masthmagaa.com:

ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿರೊ 865 ಪ್ರದೇಶಗಳಿಗೆ ಅನ್ವಯ ಆಗುವಂತೆ ಮಹಾತ್ಮ ಜ್ಯೋತಿರಾವ್‌ ಫುಲೆ ಜನಾರೋಗ್ಯ ಯೋಜನೆ ಜಾರಿ ಮಾಡೋಕೆ ಮಹಾರಾಷ್ಟ್ರ ಸರ್ಕಾರ ಹೇಳಿತ್ತು. ಇದೀಗ ಯೋಜನೆ ಕುರಿತು ಆದೇಶ ಹೊರಡಿಸಿದ್ದು, ಸಿಎಂ ಬೊಮ್ಮಾಯಿ ತೀವ್ರವಾಗಿ ಖಂಡಿಸಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. ಆದರೂ ಮಹಾರಾಷ್ಟ್ರ ಸರ್ಕಾರ ಎರಡೂ ರಾಜ್ಯಗಳ ಗಡಿ ಭಾಗದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡ್ತಿದೆ. ಕರ್ನಾಟಕದ ಗಡಿಯಲ್ಲಿ ವಿಮೆ ನೀಡುವ ಆದೇಶ ಉದ್ಧಟತನದ ಪರಮಾವಧಿಯಾಗಿದೆ. ಉಭಯ ರಾಜ್ಯಗಳ ಬಾಂಧವ್ಯ ಕದಡುವ ಪ್ರಯತ್ನ ಅಂತ ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply