ಬಿಜೆಪಿ ಸರ್ಕಾರದ ಮೇಲೆ ಟೆಂಡರ್‌ ಹಗರಣದ ಆರೋಪ ಹೇರಿದ ಕಾಂಗ್ರಸ್!

masthmagaa.com:

ವಿಧಾನಸಭಾ ಚುನಾವಣೆ ಬೆನ್ನಲ್ಲೇ ರಾಜ್ಯ ಸರ್ಕಾರದ ಮೇಲೆ ಕಾಂಗ್ರೆಸ್‌ ಭಾರೀ ಆರೋಪ ಮಾಡಿದೆ. ಸರ್ಕಾರದಿಂದ ಸಾವಿರಾರು ಕೋಟಿ ಟೆಂಡರ್‌ ಹಗರಣ ನಡೆದಿದೆ. ಒಂದೇ ದಿನ 18 ಸಾವಿರ ಕೋಟಿ ಟೆಂಡರ್‌ ಆಗಿದೆ. ಇದರ ನೇತೃತ್ವವನ್ನ ಸಿಎಂ ಬಸವರಾಜ ಬೊಮ್ಮಾಯಿಯವ್ರು ವಹಿಸಿಕೊಂಡಿದ್ದಾರೆ ಅಂತ ವಿಪಕ್ಷ ನಾಯಕ ಮಾಜಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಈ ಹಗರಣವನ್ನ ಕೋರ್ಟ್‌ಗೆ ತೆಗೆದುಕೊಂಡು ಹೋಗ್ತೀವೆ ಎಂದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು, ಆಧಾರವಿಲ್ಲದೇ ಕಾಂಗ್ರೆಸ್ ನಾಯಕರು ಆರೋಪ ಮಾಡ್ತಿದ್ದಾರೆ. ದಾಖಲೆ ಇಟ್ಟುಕೊಂಡು ದೂರು ನೀಡಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವ ಹೇಳಿಕೆ ಸರಿಯಲ್ಲ ಅಂತ ಕಾಂಗ್ರೆಸ್ ಆರೋಪಕ್ಕೆ ರವಿ ವಾಗ್ದಾಳಿ ನಡೆಸಿದ್ದಾರೆ. ಅಂದ್ಹಾಗೆ ಈ ಆರೋಪಕ್ಕೆ ಪೂರಕವಾಗುವಂತ ಘಟನೆ ಇತ್ತೀಚೆಗೆ ಆಗಿತ್ತು. ಬಿಜೆಪಿ ಶಾಸಕರಾಗಿರೋ ಗೂಳಿಹಟ್ಟಿ ಶೇಖರ್‌ ಅವ್ರು, KBJNL, VGJANL, KNNL ಹೀಗೆ ಹಲವು ನೀರಾವರಿ ನಿಗಮಗಳಲ್ಲಿ ಅಕ್ರಮವಾಗಿ ಒಂದೇ ದಿನ ಸುಮಾರು 18,000 ಕೋಟಿ ರೂ.ಗೆ ನೀಡಿರುವ ಟೆಂಡರ್‌, ವರ್ಕ್‌ ಆರ್ಡರ್‌ಗೆ ನೀಡಿರುವ ಆದೇಶ ರದ್ದುಪಡಿಸಿ ಮರು ಟೆಂಡರ್‌ಗೆ ಆದೇಶ ನೀಡಿರುವುದನ್ನು ರದ್ದು ಮಾಡಬೇಕು ಅಂತ ಪತ್ರ ಬರೆದಿದ್ರು.

-masthmagaa.com

Contact Us for Advertisement

Leave a Reply